KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

BIG NEWS : ಖಾತೆಯಲ್ಲಿ ‘ಹಣ’ ಇಲ್ಲದಿದ್ರೂ ‘ಚೆಕ್’ ಮಾನ್ಯ ಮಾಡಿದ ‘ಬ್ಯಾಂಕ್ ಆಫ್ ಮಹಾರಾಷ್ಟ್ರ’ಗೆ ಬಿತ್ತು 1,40,000 ರೂ. ದಂಡ

Published September 21, 2024 at 9:33 am
Share
SHARE

ಧಾರವಾಡ : ಖಾತೆಯಲ್ಲಿ ಹಣ ಇಲ್ಲದಿದ್ರೂ ಚೆಕ್ ಮಾನ್ಯ ಮಾಡಿದ ಬ್ಯಾಂಕ್ ಆಫ್ ಮಹಾರಾಷ್ಟ್ರಗೆ 1,40,000 ರೂ. ದಂಡ ವಿಧಿಸಲಾಗಿದೆ.

ಧಾರವಾಡದ ಕೊಟ್ಟಣದ ಓಣಿ ನಿವಾಸಿ ಸುಮನ್ ಅತ್ತಿಗೇರಿ ಎಂಬುವವರು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರದ ಗ್ರಾಹಕಳಾಗಿದ್ದು, ಆ ಬ್ಯಾಂಕಿನಲ್ಲಿ ತನ್ನ ಉಳಿತಾಯ ಖಾತೆಯನ್ನು ಹೊಂದಿ ತನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತಾಳೆ. ಹೀಗಿರುವಾಗ ತನ್ನ ಪತಿಯ ಆರೋಗ್ಯದ ಖರ್ಚಿನ ಸಲುವಾಗಿ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸಕಾಲಧನ ಸಹಕಾರಿ ಸಂಘದಿಂದ ರೂ.80,000/- ಸಾಲ ಪಡೆದಿದ್ದು, ಆ ಮೊತ್ತವನ್ನು ಸಹಕಾರಿ ಸಂಘದವರು ತನ್ನ ಖಾತೆಗೆ ದಿನಾಂಕ:22/05/2024ರಂದು ವರ್ಗಾವಣೆ ಮಾಡಿರುತ್ತಾರೆ. ತಾನು ಆ ಹಣವನ್ನು ನಗಧೀಕರಣ ಮಾಡಿಕೊಳ್ಳಲು ದಿ:23/05/2024ರಂದು ಸದರಿ ಎದುರುದಾರ ಬ್ಯಾಂಕಿಗೆ ಹೋದಾಗ ತನ್ನ ಖಾತೆಯಲ್ಲಿ ಯಾವುದೇ ಹಣ ಜಮಾ ಇರುವುದಿಲ್ಲ ಅಂತಾ ತಿಳಿಸಿರುತ್ತಾರೆ. ತದ ನಂತರ ತನ್ನ ಬ್ಯಾಂಕ್ ಪಾಸಬುಕ್ನಲ್ಲಿ ಹಣ ಜಮೆ ಆದ ಕುರಿತು ಎದುರುದಾರರ ಗಮನಕ್ಕೆ ತಂದರೂ ಸಹ ಅವರು ತನಗೆ ಹಣ ನಗಧೀಕರಣ ಮಾಡಿಕೊಳ್ಳಲು ಅವಕಾಶ ನೀಡದೇ ಸತಾಯಿಸಿರುತ್ತಾರೆ. ಈ ಬಗ್ಗೆ ಶಾಖಾ ವ್ಯವಸ್ಥಾಪಕರಿಗೆ ದಿ:24/05/2024ರಂದು ತನಗೆ ಖಾತೆಯಲ್ಲಿನ ಹಣ ಪಡೆದುಕೊಳ್ಳಲು ಅನುಮತಿಸಬೇಕು ಅಂತಾ ಪತ್ರ ಬರೆದರೂ ಏನೂ ಪ್ರಯೋಜನ ಆಗಿಲ್ಲ. ಎದುರುದಾರ ಬ್ಯಾಂಕಿನವರು ತನಗೆ ತನ್ನ ಹಣ ವಿತ್ ಡ್ರಾ ಮಾಡಿಕೊಳ್ಳಲು ನಿರಾಕರಿಸಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರಳು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:28/06/2024 ರಂದು ದೂರು ಸಲ್ಲಿಸಿದ್ದರು.

ದೂರುದಾರಳು ಈ ಪ್ರಕರಣ ದಾಖಲಿಸುವ ಪೂರ್ವದಲ್ಲಿ ಎದುರುದಾರ ಬ್ಯಾಂಕಿಗೆ ನೋಟಿಸು ಕೊಟ್ಟಿದ್ದರು. ಅದಕ್ಕೆ ಪ್ರತಿ ಉತ್ತರವಾಗಿ ಬ್ಯಾಂಕಿನವರು ಸದರಿ ದೂರುದಾರಳು ತನ್ನ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ ಓರ್ವ ಶಿವಕುಮಾರ ಗಂಗಾಧರ ಹಿರೇಮಠ ಎಂಬುವವರಿಗೆ ರೂ.2 ಲಕ್ಷಗಳ ಚೆಕ್ಕನ್ನು ಕೊಟ್ಟಿದ್ದರು. ಆ ಚೆಕ್ಕನ್ನು ಬ್ಯಾಂಕ್ ಮಾನ್ಯಮಾಡಿ ಹಣ ಸಂದಾಯ ಮಾಡಿರುವುದಾಗಿ ಹೇಳಿ, ದೂರುದಾರಳೇ ಚೆಕ್ ಹಣವನ್ನು ಬ್ಯಾಂಕಿಗೆ ಭರಿಸ ಬೇಕು ಅಂತಾ ಆಕ್ಷೇಪಿಸಿದ್ದರು. ಇಲ್ಲದೇ ಇದ್ದಲ್ಲಿ ದೂರುದಾರಳ ವಿರುದ್ಧ ಮಾನಹಾನಿ ಮತ್ತು ಮಾನಸಿಕ ಹಿಂಸೆ ಪ್ರಕರಣ ದಾಖಲಿಸಿರುವುದಾಗಿ ಎದುರುದಾರ ಬ್ಯಾಂಕಿನವರು ನೋಟಿಸಿನಲ್ಲಿ ತಿಳಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರಳ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ ಸಹ ರೂ.2 ಲಕ್ಷಗಳ ಚೆಕ್ಕನ್ನು ಎದುರುದಾರ ಬ್ಯಾಂಕ್ ಮಾನ್ಯ ಮಾಡಿರುವುದಾಗಿ ಹೇಳಿದ್ದು ಇರುತ್ತದೆ. ಆದರೆ ರಿಸರ್ವ ಬ್ಯಾಂಕ್ ಆಪ್ ಇಂಡಿಯಾ ಮಾರ್ಗಸೂಚಿಗಳಂತೆ ಹಾಗೂ ಬ್ಯಾಂಕಿಂಗ್ ನಿಯಮಾವಳಿಗಳಂತೆ ಯಾವುದೇ ವ್ಯಕ್ತಿಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಬೇರೊಬ್ಬ ವ್ಯಕ್ತಿ/ಸಂಸ್ಥೆಗೆ ಚೆಕ್ಕನ್ನು ನೀಡಿದ್ದರೇ, ಆ ಚೆಕ್ಕನ್ನು ನಗಧೀಕರಿಸುವ ಬ್ಯಾಂಕ್/ಹಣಕಾಸು ಸಂಸ್ಥೆ ಮೊದಲು ಆತನ ಖಾತೆಯಲ್ಲಿ ಸಾಕಷ್ಟು ಹಣ ಜಮೆ ಇದೆಯೋ ಇಲ್ಲವೋ ಅಂತಾ ಪರಿಶೀಲಿಸಿ ನಂತರ ಆ ಚೆಕ್ಕನ್ನು ಮಾನ್ಯ ಮಾಡಲಾಗುತ್ತದೆ.

ಒಂದು ವೇಳೆ ಚೆಕ್ಕು ನೀಡಿದ ವ್ಯಕ್ತಿಯ ಖಾತೆಯಲ್ಲಿ ಸಾಕಷ್ಟು ಹಣ ಜಮಾ ಇಲ್ಲದೇ ಹೋದರೆ ಆ ಚೆಕ್ಕನ್ನು ಸಾಕಷ್ಟು ಹಣ ಇಲ್ಲ ಎಂಬ ಹಿಂಬರಹದೊಂದಿಗೆ ಅಮಾನ್ಯ ಮಾಡಲಾಗುತ್ತದೆ. ಆದರೆ ದೂರುದಾರಳ ಪ್ರಕರಣದಲ್ಲಿ ಅವಳ ಖಾತೆಯಲ್ಲಿ ಸಾಕಷ್ಟು ಹಣಇರದೇ ಹೋದರೂ ಅವಳ ಚೆಕ್ಕನ್ನು ಮಾನ್ಯ ಮಾಡಿ ಎದುರುದಾರ ಬ್ಯಾಂಕಿನವರು ಕರ್ತವ್ಯ ಲೋಪ ಎಸಗಿರುತ್ತಾರೆ. ಅಲ್ಲದೇ ಅವಳು ಬೇರೊಂದು ಸಹಕಾರಿ ಸಂಘದಿಂದ ಪಡೆದ ಸಾಲದ ಹಣ ರೂ.80,000/-ಗಳನ್ನು ಅವಳಿಗೆ ವಿತ್ಡ್ರಾ ಮಾಡಿಕೊಡಲು ನಿರಾಕರಿಸಿ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರಳು ಸಹಕಾರಿ ಸಂಘದಿಂದ ಪಡೆದ ಹಣ ರೂ.80,000/- ಗಳನ್ನು ಅದರ ಮೇಲೆ ವಾರ್ಷಿಕ ಶೆ8% ರಂತೆ ಬಡ್ಡಿ ಲೆಕ್ಕ ಹಾಕಿ ದಿ:22/05/2024 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ದೂರುದಾರಳಿಗೆ ಸಂದಾಯ ಮಾಡಲು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರಕ್ಕೆ ಆಯೋಗ ಆದೇಶಿಸಿರುತ್ತದೆ ಜೊತೆಗೆ ಪಿರ್ಯಾದಿದಾರಳಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರ ಬ್ಯಾಂಕಿಗೆ ಸೂಚಿಸಿದೆ.

 

You Might Also Like

ಆಧಾರ್ ಕಾರ್ಡ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ ಗುಡ್ ನ್ಯೂಸ್: ಪಿಎಂ ಆವಾಸ್ ಯೋಜನೆಯಡಿ ಮನೆ ಸೌಲಭ್ಯ

ರೈತರಿಗೆ ಭರ್ಜರಿ ಗುಡ್ ನ್ಯೂಸ್: 68 ದಿನಗಳಲ್ಲೇ ಕೊಯ್ಲಿಗೆ ಬರುವ, ವರ್ಷಕ್ಕೆ 5 ಬೆಳೆ ಬೆಳೆಯುವ ರಾಗಿ ತಳಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು | Rapid Ragi

10, 12ನೇ ತರಗತಿ ಪಾಸಾದವರಿಗೆ ಭರ್ಜರಿ ಸುದ್ದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ

ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನನ್ನೇ ಕೊಲೆಗೈಯಲು ಯತ್ನಿಸಿದ ಆರೋಪಿಗಳು ಅರೆಸ್ಟ್

ನಿತ್ರಾಣದಿಂದ ರಸ್ತೆ ಬದಿಯಲ್ಲೇ ಬಿದ್ದಿದ್ದ ವೃದ್ದನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ನ್ಯಾಯಾಧೀಶ

TAGGED:000 Fine40BIG NEWS : Even though there is no 'money' in the accountthe 'cheque' has been validated by the Bank of Maharashtra for Rs 1
Share This Article
Facebook Copy Link Print

Latest News

ಆಧಾರ್ ಕಾರ್ಡ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ ಗುಡ್ ನ್ಯೂಸ್: ಪಿಎಂ ಆವಾಸ್ ಯೋಜನೆಯಡಿ ಮನೆ ಸೌಲಭ್ಯ
ರೈತರಿಗೆ ಭರ್ಜರಿ ಗುಡ್ ನ್ಯೂಸ್: 68 ದಿನಗಳಲ್ಲೇ ಕೊಯ್ಲಿಗೆ ಬರುವ, ವರ್ಷಕ್ಕೆ 5 ಬೆಳೆ ಬೆಳೆಯುವ ರಾಗಿ ತಳಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು | Rapid Ragi
10, 12ನೇ ತರಗತಿ ಪಾಸಾದವರಿಗೆ ಭರ್ಜರಿ ಸುದ್ದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ
ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನನ್ನೇ ಕೊಲೆಗೈಯಲು ಯತ್ನಿಸಿದ ಆರೋಪಿಗಳು ಅರೆಸ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ಭಾರತದ ಮೊದಲ ʼಎಲೆಕ್ಟ್ರಿಕ್‌ʼ ಕಾರಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಟಾಟಾ ಮೋಟಾರ್ಸ್ ಸಹಿ
ಹೊಸ ಕಾರು ಡೆಲಿವರಿ ವೇಳೆ ಅಗಲಿದ ಪತ್ನಿ ನೆನಪು ; ಕಣ್ಣೀರಿಟ್ಟ ಪತಿ | Watch

Entertainment

ಒಂದು ಘಟನೆ, ಒಂದು ಪೆಟ್ಟು: ಲಲಿತಾ ಪವಾರ್‌ ಸಿನಿ ಬದುಕನ್ನೇ ಬದಲಿಸಿದ ಪ್ರಸಂಗ !
ಬಾಲಿವುಡ್ ನಿರ್ದೇಶಕನ ಜೊತೆ ಸಮಂತಾ ನಂಟು : ಮಾಜಿ ಪತ್ನಿಯ ಇನ್‌ಸ್ಟಾಗ್ರಾಮ್ ಸ್ಟೋರಿ ವೈರಲ್‌ !
ಅತ್ಯಾಚಾರ ಮಾಡಿದ್ದಕ್ಕೆ ಜೈಲು ಶಿಕ್ಷೆ ; ನಟ ಶೈನಿ ಅಹುಜಾ ಈಗೆಲ್ಲಿದ್ದಾರೆ ಗೊತ್ತಾ ?

Sports

BIG NEWS : ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಆಸ್ಪತ್ರೆಗೆ ದಾಖಲು : ಫೋಟೋ ವೈರಲ್
BREAKING NEWS: ಒಸ್ಟ್ರಾವಾದಲ್ಲಿ ಚಿನ್ನ ಗೆದ್ದ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ
BREAKING: KL ರಾಹುಲ್ ಶತಕದ ಬೆನ್ನಲ್ಲೇ ಭರ್ಜರಿ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ, ಒಂದೇ ಟೆಸ್ಟ್ ಪಂದ್ಯದಲ್ಲಿ 2 ಸೆಂಚುರಿ

Special

ಮಣ್ಣಿನ ಮಡಿಕೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದು ಆರೋಗ್ಯಕ್ಕೆ ಬೆಸ್ಟ್
ʼಕಲ್ಲಂಗಡಿʼ ಕೊಳ್ಳುವಾಗ ಈ ಟ್ರಿಕ್ಸ್ ಬಳಸಿ !
OMG : ಮೃಗಾಲಯದಲ್ಲಿ ಸಿಗರೇಟ್ ಸೇದಿದ ಚಿಂಪಾಂಜಿ : ವಿಡಿಯೋ ಭಾರಿ ವೈರಲ್ |WATCH VIDEO

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?