alex Certify ಕೆರೆಗೆ ಬಿದ್ದ ಚಪ್ಪಲಿ ತೆಗೆಯಲು ಹೋದಾಗಲೇ ದುರಂತ: ನೀರಲ್ಲಿ ಮುಳುಗಿ ಇಬ್ಬರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆಗೆ ಬಿದ್ದ ಚಪ್ಪಲಿ ತೆಗೆಯಲು ಹೋದಾಗಲೇ ದುರಂತ: ನೀರಲ್ಲಿ ಮುಳುಗಿ ಇಬ್ಬರು ಸಾವು

ಹಾಸನ: ಕೆರೆಗೆ ಬಿದ್ದ ಚಪ್ಪಲಿ ತೆಗೆಯಲು ಹೋಗಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ದೊಡ್ಡಕೆರೆಯಲ್ಲಿ ನಡೆದಿದೆ.

ಶ್ರೀಕಾಂತ್(15), ವಿಜಯ್(18) ಮೃತಪಟ್ಟವರು ಎಂದು ಹೇಳಲಾಗಿದೆ. ಕೆರೆಗೆ ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಮಳೆ ಬಂದಿದ್ದು, ರಕ್ಷಣೆಗಾಗಿ ಇಬ್ಬರೂ ಸಮೀಪದಲ್ಲೇ ಇದ್ದ ಮರದ ಕೆಳಗೆ ನಿಂತಿದ್ದಾರೆ.

ಈ ವೇಳೆ ವಿಜಯ್ ಅವರ ಒಂದು ಕಾಲಿನ ಚಪ್ಪಲಿ ಕೆರೆಗೆ ಬಿದ್ದಿದ್ದು, ಚಪ್ಪಲಿ ತೆಗೆದುಕೊಳ್ಳಲು ಶ್ರೀಕಾಂತ್ ನೀರಿಗೆ ಇಳಿದಿದ್ದಾನೆ. ಹೂಳು, ಗಿಡ, ಗಂಟಿಗಳು ಬೆಳೆದಿದ್ದ ಕೆರೆಯ ನೀರಿನಲ್ಲಿ ಸಿಲುಕಿ ಒದ್ದಾಡಿದ್ದಾನೆ. ಆತನ ರಕ್ಷಣೆಗೆ ವಿಜಯ್ ಕೂಡ ತೆರಳಿದ್ದು ಈಜು ಬಾರದ ಕಾರಣ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳೀಯರು ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...