alex Certify ವಾಸ್ತು ದೋಷ ನಿವಾರಿಸಲು ಮಾಡಿ ಈ ಕೆಲಸ; ಇಲ್ಲದಿದ್ದರೆ ನೆಲೆಸುತ್ತೆ ನಕಾರಾತ್ಮಕ ಶಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಸ್ತು ದೋಷ ನಿವಾರಿಸಲು ಮಾಡಿ ಈ ಕೆಲಸ; ಇಲ್ಲದಿದ್ದರೆ ನೆಲೆಸುತ್ತೆ ನಕಾರಾತ್ಮಕ ಶಕ್ತಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಈ ಕಾರಣದಿಂದಾಗಿ ಮನೆಯಲ್ಲಿ ನಕಾರಾತ್ಮಕತೆ ಮತ್ತು ಸಕಾರಾತ್ಮಕತೆ ಎರಡೂ ನೆಲೆಸಬಹುದು. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮಲಗಿರುವಾಗ ಕೋಣೆಯಲ್ಲಿ ಇನ್ಯಾರೋ ಇದ್ದಾರೆ, ಯಾರಾದರೂ ನಮ್ಮನ್ನು ರಹಸ್ಯವಾಗಿ ಗಮನಿಸುತ್ತಿದ್ದಾರೆ ಎಂದೆಲ್ಲ ನಮಗೆ ಅನೇಕ ಬಾರಿ ಅನಿಸುತ್ತದೆ.

ಇದು ಸಾಂದರ್ಭಿಕವಾಗಿ ಸಂಭವಿಸಿದರೆ ಅದು ಸಹಜ. ಆದರೆ ಪ್ರತಿದಿನ ಈ ರೀತಿ ಅನಿಸುತ್ತಿದ್ದರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ. ಇಂತಹ ವಾಸ್ತು ದೋಷಗಳನ್ನು ತೆಗೆದುಹಾಕಲು ಕೂಡ ಅನೇಕ ಪರಿಹಾರಗಳಿವೆ.

ಕಸ ಮತ್ತು ಜಂಕ್

ಅನೇಕ ಬಾರಿ ನಾವು ಕೋಣೆಯಲ್ಲಿ ಕಸ ಅಥವಾ ಜಂಕ್ ಅನ್ನು ಇಡುತ್ತೇವೆ. ಅನಗತ್ಯ ಖಾಲಿ ಪೆಟ್ಟಿಗೆಗಳು, ಕಾಗದಗಳು ವಾಸ್ತು ದೋಷಗಳನ್ನು ಉಂಟುಮಾಡುತ್ತವೆ. ಇಂತಹ ವಸ್ತುಗಳನ್ನು ತೆಗೆದುಹಾಕಬೇಕು. ಕೋಣೆಯಲ್ಲಿರುವ ಸ್ಕ್ರ್ಯಾಪ್ ಅಥವಾ ಜಂಕ್ ದುಃಸ್ವಪ್ನಗಳಿಗೆ ಕಾರಣವಾಗುತ್ತದೆ. ಯಾವಾಗಲೂ ಕಸ ಅಥವಾ ಜಂಕ್ ಅನ್ನು ಸ್ಟೋರ್ ರೂಂನಲ್ಲಿ ಇರಿಸಿ.

ಪೂರ್ವಜರ ಫೋಟೋ

ಸಾಮಾನ್ಯವಾಗಿ ಮೃತ ಸಂಬಂಧಿಕರ ಚಿತ್ರಗಳನ್ನು ಕೋಣೆಯಲ್ಲಿ ನೇತು ಹಾಕುತ್ತೇವೆ. ಇದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಹಾಲ್‌ ಅಥವಾ ಮಲಗುವ ಕೋಣೆಯಲ್ಲಿ ಸತ್ತ ಸಂಬಂಧಿಕರ ಛಾಯಾಚಿತ್ರಗಳಿದ್ದರೆ ಅವುಗಳನ್ನು ತೆಗೆದುಹಾಕಬೇಕು. ಇವು ಮನಸ್ಸಿನಲ್ಲಿ ಭಯ ಉಂಟುಮಾಡಬಹುದು, ನಿದ್ದೆಗೆ ಅಡ್ಡಿಪಡಿಸಬಹುದು.

ಅಸ್ತವ್ಯಸ್ತ ಕೊಠಡಿ ಅಥವಾ ಮುರಿದ ವಸ್ತುಗಳು

ಕೋಣೆಯಲ್ಲಿ ಚದುರಿದ ವಸ್ತುಗಳು ಅಥವಾ ಶೋ ಪೀಸ್‌ಗಳಂತಹ ಮುರಿದ ವಸ್ತುಗಳು ಇರಬಾರದು. ಚದುರಿದ ವಸ್ತುಗಳು ಮತ್ತು ಮುರಿದ ವಸ್ತುಗಳು ವಾಸ್ತು ದೋಷಗಳಿಗೆ ಕಾರಣವಾಗುತ್ತವೆ. ಇವು ನಮ್ಮ ಪ್ರಗತಿಗೆ ಅಡ್ಡಿಪಡಿಸುವ ನಕಾರಾತ್ಮಕತೆಯನ್ನು ಹರಡುತ್ತವೆ. ಆದ್ದರಿಂದ ಅವುಗಳನ್ನು ಹೊರಗೆಸೆಯಿರಿ.

ಇವೆಲ್ಲದರ ಜೊತೆಗೆ ಮಲಗುವ ಸಮಯದಲ್ಲಿ ನಮ್ಮ ಪಾದಗಳು ದಕ್ಷಿಣ ದಿಕ್ಕಿನಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ದಕ್ಷಿಣ ದಿಕ್ಕು ಯಮನ ದಿಕ್ಕು, ಈ ದಿಕ್ಕಿನತ್ತ ಹೆಜ್ಜೆ ಇಡಬಾರದು. ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...