SHOCKING: ದರ್ಗಾ ಬಳಿ ತಂದೆಗಾಗಿ ಕಾಯುತ್ತಿದ್ದ 4 ವರ್ಷದ ಬಾಲಕಿ ಕೊಂದು ಹಾಕಿದ ಬೀದಿ ನಾಯಿ

ಉದಯ್‌ ಪುರ: ರಾಜಸ್ಥಾನದ ಉದಯಪುರದ ದರ್ಗಾವೊಂದರ ಬಳಿ ಶುಕ್ರವಾರ ನಾಲ್ಕು ವರ್ಷದ ಬಾಲಕಿಯನ್ನು ಬೀದಿನಾಯಿಯೊಂದು ಕೊಂದು ಹಾಕಿದೆ.

ರೇಷ್ಮಾ ಎಂದು ಗುರುತಿಸಲಾದ ಪುಟ್ಟ ಬಾಲಕಿ ದರ್ಗಾದ ಹೊರಗಿನ ಸ್ಥಳದ ಬಳಿ ತನ್ನ ತಂದೆಗಾಗಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಧ್ಯಪ್ರದೇಶ ಮೂಲದ ಕುಟುಂಬವು ರಂಜಾನ್ ಸಂದರ್ಭದಲ್ಲಿ ದರ್ಗಾವನ್ನು ಭೇಟಿ ಮಾಡಲು ಬಂದಿತ್ತು ಎಂದು ಅಂಬಾ ಮಾತಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ರಂಜೀತ್ ಸಿಂಗ್ ಹೇಳಿದ್ದಾರೆ.

ರೇಷ್ಮಾ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read