ವಿಚ್ಛೇದನ ನೋಟಿಸ್ ನೀಡಿದ ನಂತರದ ದೂರುಗಳು ನಗಣ್ಯ; ಹೈಕೋರ್ಟ್ ಮಹತ್ವದ ಅಭಿಮತ

ವಿವಾಹ ವಿಚ್ಛೇದನ ನೋಟಿಸ್ ನೀಡಿದ ಬಳಿಕ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಸಲ್ಲಿಸಲಾಗುವ ದೂರುಗಳು ತನ್ನ ಮಹತ್ವ ಕಳೆದುಕೊಳ್ಳುತ್ತವೆ ಎಂದು ಮಹತ್ವದ ಅಭಿಪ್ರಾಯ ಪಟ್ಟಿರುವ ಹೈಕೋರ್ಟ್ ಕಲಬುರ್ಗಿ ಪೀಠ, ಈ ಕುರಿತಂತೆ ಪತಿ ವಿರುದ್ಧ ಪತ್ನಿ ನೀಡಿದ್ದ ದೂರನ್ನು ರದ್ದು ಮಾಡಿದೆ.

ಪ್ರಕರಣದ ವಿವರ: 2013ರಲ್ಲಿ ರಾಯಚೂರಿನ ದೇವದುರ್ಗದ ಸುಮಾ ಎಂಬವರು ಗೋಪಾಲ್ ಗುಂಡ್ಯಾಲ್ ಎಂಬವರನ್ನು ವಿವಾಹವಾಗಿದ್ದು, ಆದರೆ ತನಗೆ ಹಿಂದಿ ಅಥವಾ ಮರಾಠಿ ಬಾರದ ಹಿನ್ನೆಲೆಯಲ್ಲಿ ಪತಿ, ಪುಣೆಗೆ ಕರೆದುಕೊಂಡು ಹೋಗದೆ ಸಂಬಂಧಿಗಳ ಮನೆಯಲ್ಲಿ ಬಿಟ್ಟಿದ್ದಾರೆ ಎಂದು ಸುಮಾ ಆರೋಪಿಸಿದ್ದರು.

ಬಳಿಕ ಪತಿ-ಪತ್ನಿ ನಡುವೆ ಮನಸ್ತಾಪ ಹೆಚ್ಚಾಗಿ, ಪತಿ 2018 ರಲ್ಲಿ ವಿವಾಹ ವಿಚ್ಛೇದನ ಕೋರಿ ಸೊಲ್ಲಾಪುರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪತ್ನಿ ಸುಮಾ ಅವರಿಗೆ ನೋಟಿಸ್ ಕಳುಹಿಸಿದ್ದರು. ಆ ಬಳಿಕ ಪತ್ನಿ, ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ದೂರು ದಾಖಲಿಸಿದ್ದು, ಇದನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಇದೀಗ ಮಾನ್ಯ ನ್ಯಾಯಾಲಯ ಪತಿ ಹಾಗೂ ಆತನ ಕುಟುಂಬದ ವಿರುದ್ಧದ ಎಫ್ಐಆರ್ ರದ್ದು ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read