ಲೈಂಗಿಕ ಸುಖ ನೀಡಲು ಒತ್ತಾಯ; ಪತಿ ಕಾಟಕ್ಕೆ ಬೇಸತ್ತು ಬಾವಿಗೆ ಹಾರಿದ ಪತ್ನಿ…!

ಪತಿ – ಪತ್ನಿ ಕಂಠಪೂರ್ತಿ ಕುಡಿದು ಮಲಗಿದ್ದ ವೇಳೆ ಪತಿರಾಯ ಲೈಂಗಿಕ ಸುಖಕ್ಕೆ ಒತ್ತಾಯಿಸಿದ್ದು, ಇದರಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ್ದಾಳೆ. ಆಗ ಆಕೆಯನ್ನು ರಕ್ಷಿಸಿದ ಪತಿ, ಮೇಲೆ ಕರೆತಂದ ಬಳಿಕ ಹತ್ಯೆ ಮಾಡಿದ್ದಾನೆ.

ಇಂತಹದೊಂದು ವಿಲಕ್ಷಣ ಘಟನೆ ಚತ್ತೀಸ್ಗಡದ ರಾಯಪುರ ಜಿಲ್ಲೆಯ ಜಶ್ಪುರ ಎಂಬಲ್ಲಿ ಸೋಮವಾರದಂದು ನಡೆದಿದ್ದು, ಶಂಕರ್ ಮತ್ತು ಆತನ ಪತ್ನಿ ಆಶಾ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿ ಮಲಗಿದ್ದರು.

ಈ ವೇಳೆ ಲೈಂಗಿಕ ಸುಖಕ್ಕೆ ಶಂಕರ್ ಒತ್ತಾಯಿಸಿದಾಗ ಆತನೊಂದಿಗೆ ಜಗಳವಾಡಿದ ಆಶಾ ಬಾವಿಗೆ ಹಾರಿದ್ದಾಳೆ. ಆಗ ಅವಳನ್ನು ರಕ್ಷಿಸಿ ಮೇಲೆ ಕರೆತಂದ ಶಂಕರ್ ಮತ್ತೆ ಜಗಳ ಆರಂಭಿಸಿದ್ದು, ಕೋಪದ ಭರದಲ್ಲಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read