ಮಾಜಿ ಸಚಿವರ ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳವು

ಮಾಜಿ ಸಚಿವರ ಮನೆ ಮುಂದೆ ನಿಲ್ಲಿಸಿದ್ದ 18 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಮುಸುಕುಧಾರಿ ಕಳ್ಳ, ಕಳವು ಮಾಡಿಕೊಂಡು ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮಾಜಿ ಸಚಿವ ಎಂ. ಶಿವಣ್ಣ ಅವರಿಗೆ ಸೇರಿದ್ದ ಕಾರನ್ನು ಕಳವು ಮಾಡಲಾಗಿದ್ದು, ಅವರ ವಿಜಯನಗರ ಮನೆಯ ಮುಂದೆ ನಿಲ್ಲಿಸಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.

ಜೂನ್ 5 ರಂದು ಚಾಲಕ ರಘು ಕಾರು ನಿಲ್ಲಿಸಿ ಬೀಗವನ್ನು ಮನೆ ಸಹಾಯಕನ ಬಳಿ ಕೊಟ್ಟು ಹೋಗಿದ್ದು, ಮಾರನೇ ದಿನ ಬೆಳಿಗ್ಗೆ ಕಾರು ಅಲ್ಲಿರಲಿಲ್ಲ. ಸಿಸಿ ಟಿವಿ ಪರಿಶೀಲಿಸಿದ ವೇಳೆ ಅಪರಿಚಿತ ವ್ಯಕ್ತಿ ಮನೆಯೊಳಗೆ ಬಂದು ಕಾರಿನ ಕೀ ತೆಗೆದುಕೊಂಡು ಹೋಗಿರುವುದು ಸೆರೆಯಾಗಿದೆ. ಇದೀಗ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read