ಬೆಂಗಳೂರು : ಕನ್ನಡದ ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ ಎದ್ದಿದ್ದು, ವಿವಾಹ ವಿಚ್ಚೇದನಕ್ಕೆ ದಂಪತಿಗಳು ಅರ್ಜಿ ಸಲ್ಲಿಸಿದ್ದಾರೆ.
ಹೌದು, ಸುಮಧುರ ಕಂಠದಿಂದ ಕನ್ನಡಿಗರ ಮನೆ ಮಾತಾದ ಗಾಯಕಿ ಕನ್ನಡ ಕೋಗಿಲೆ ಸಿಂಗಿಂಗ್ ಶೋನಲ್ಲಿ ರನ್ನರ್ ಅಪ್ ಆಗಿದ್ದರು.

ಇದೀಗ ಅಖಿಲಾ ಪಜಿಮಣ್ಣು ಮತ್ತು ಆಕೆಯ ಪತಿ ಟಿ ಆರ್ ಧನರಾಜ್ ಶರ್ಮ ವಿವಾಹ ವಿಚ್ಚೇದನಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ 3 ವರ್ಷದ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಅಖಿಲಾ ಅವರು ಅಮೆರಿಕಾದಲ್ಲಿ ಇಂಜಿನಿಯರ್ ಆಗಿದ್ದ ಧನರಾಜ್ ಅವರನ್ನು ವಿವಾಹವಾಗಿದ್ದರು. ಜೂನ್ 12 ರಂದು ಇಬ್ಬರು ಕೋರ್ಟ್ ಗೆ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 20 ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಖುಷಿ ಖುಷಿಯಾಗಿದ್ದ ಜೋಡಿಗಳ ಬಾಳಲ್ಲಿ ಅದೇನು ಆಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಬಿರುಗಾಳಿ ಎದ್ದಿದೆ.

TAGGED:ಅಖಿಲಾ ಪಜಿಮಣ್ಣು