ಯತ್ನಾಳ್ ಕಾರ್ಖಾನೆ ಬಂದ್: ಕಂಗಾಲಾದ ರೈತರು; ಕಬ್ಬುಬೆಳೆಗಾರರ ನೆರವಿಗೆ ನಿಂತ ಡಿಸಿ

ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.

ಸರ್ಕಾರ ಹಾಗೂ ಯತ್ನಾಳ್ ಒಡೆತನದ ಕಲಬುರಗಿಯಲ್ಲಿದ್ದ ಸಕ್ಕರೆ ಕಾರ್ಖಾನೆ ನಡುವೆ ಜಟಾಪಟಿ ಹಿನ್ನೆಲೆಯಲ್ಲಿ ಕಾರ್ಖಾನೆ ಬಂದ್ ಆಗಿದ್ದು, ಇದರಿಂದಾಗಿ ಸೇಡಂ, ಚಿಂಚೋಳಿ ಭಾಗದ ಕಬ್ಬುಬೆಳೆಗಾರ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್ ರೈತರ ನೆರವಿಗೆ ಧಾವಿಸಿದ್ದಾರೆ.

ಸೇದಂ, ಚಿಂಚೋಳಿ ತಾಲೂಕಿನ ರೈತರು 3000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬನ್ನು ಈ ಕಾರ್ಖಾನೆಗೆ ಹಾಕುತ್ತಿದ್ದರು. ಇದೀಗ ಏಕಾಏಕಿ ಕಾರ್ಖಾನೆ ಬಂದ್ ಆಗಿದ್ದರಿಂದ ರೈತರು ಸಮಸ್ಯೆ ಎದುರಿಸಿದ್ದರು. ತಕ್ಷಣ ರೈತರ ಸಮಸ್ಯೆಗೆ ಸ್ಪಂಧಿಸಿದ ಜಿಲ್ಲಾಧಿಕಾರಿ, ರೈತರು ಬೆಳೆದಿರುವ ಕಬ್ಬನ್ನು ಸರ್ವೆ ಮಾಡಿಸಿ, ಕಾರ್ಖಾನೆ ಜೊತೆ ಒಪ್ಪಂದ ಮಾಡಿಸಿದ್ದಾರೆ. ಎರಡೂ ತಾಲೂಕಿನ ರೈತರ ಕಬ್ಬನ್ನು ಸಮೀಪದ ಕೆಪಿ ಆರ್ ಸಕ್ಕರೆ ಕಾರ್ಖಾನೆಗೆ ಹಾಗೂ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಗೆ ಹಂಚಿಕೆ ಮಾಡಿದ್ದಾರೆ. ಸದ್ಯ ಜಿಲ್ಲಾಧಿಕಾರಿಯಿಂದಾಗಿ ರೈತರ ಸಮಸ್ಯೆ ಬಗೆಹರಿದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read