ಚುಡಾಯಿಸಿದವನಿಗೆ ತಕ್ಕ ಪಾಠ ಕಲಿಸಿದ ಯುವತಿ; ವಿಡಿಯೋ ವೈರಲ್

ಬಸ್ ನಿಲ್ದಾಣದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಕಾರಣಕ್ಕೆ ಯುವತಿಯೊಬ್ಬರು ತಕ್ಕ ಶಾಸ್ತಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆಯಲ್ಲಿ ಜರುಗಿದೆ.

ಈತ ತನ್ನನ್ನು ಚುಡಾಯಿಸಿದ್ದಲ್ಲದೇ, ಉದ್ದೇಶಪೂರಿತವಾಗಿ ಮೈ ಮುಟ್ಟುತ್ತಿದ್ದ ಎಂದು ಯುವತಿ ಆಪಾದನೆ ಮಾಡಿದ್ದಾರೆ. ಹೀಗೆ ಮಾಡದಂತೆ ಎಚ್ಚರಿಕೆ ಕೊಟ್ಟರೂ ಸಹ ತನ್ನ ವರ್ತನೆ ಮುಂದುವರೆಸಿದ ಆತನಿಗೆ ಹೀಗೆ ಥಳಿಸಿದ್ದಾಗಿ ಯುವತಿ ಹೇಳಿಕೊಂಡಿದ್ದಾರೆ.

ಕೂಡಲೇ ಕಪಾಳ ಮೋಕ್ಷಕ್ಕೀಡಾದ ಯುವಕ ಬಸ್ಸಿನಿಂದ ಇಳಿದು ಹೊರಗೋಡಿದ್ದಾನೆ. ಬಸ್ಸಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಈ ಘಟನೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

https://twitter.com/KeypadGuerilla/status/1664994891657809920

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read