BIG NEWS: ಪತ್ನಿಯನ್ನು ಕೊಂದು ಅಪಘಾತದಲ್ಲಿ ಸಾವೆಂದು ಕಥೆ ಕಟ್ಟಿದ್ದ ಪತಿ, ಅತ್ತೆ-ಮಾವ ಅರೆಸ್ಟ್

ಬೆಳಗಾವಿ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಹತ್ಯೆಗೈದ ಪತಿ ಮಹಾಶಯ ಬೈಕ್ ಅಪಘಾತದಲ್ಲಿ ಹೆಂಡತಿ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿದ್ದ. ಈ ಕೃತ್ಯಕ್ಕೆ ಆತನ ತಂದೆ-ತಾಯಿಯೂ ಸಾಥ್ ನೀಡಿದ್ದಾರೆ. ಇದೀಗ ಅಥಣಿ ಪೊಲೀಸರು ಪತಿ, ಅತ್ತೆ-ಮಾವ ಮೂವರನ್ನೂ ಬಂಧಿಸಿದ್ದಾರೆ.

ಅಥಣಿ ತಾಲೂಕಿನ ರೇಣುಕಾ ಸಂತೋಷ್ ಹೋನಕಾಂಡೆ (27) ಕೊಲೆಯಾದ ಮಹಿಳೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಬಿದ್ದು ಸಾವನ್ನಪ್ಪಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆಯದ್ದು ಕೊಲೆ ಎಂಬುದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಸಂತೋಷ್, ಮಾವ ಕಾಮಣ್ಣ ಹಾಗೂ ಅತ್ತೆ ಜಯಶ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರೇಣುಕಾಳನ್ನು ತಾವೇ ಕೊಲೆ ಮಾಡಿ ಕಥೆ ಕಟ್ಟಿದ್ದಾಗಿ ಬಾಯ್ಬಿಟ್ಟಿದ್ದಾರೆ. ಮೂವರನ್ನು ಬಂಧಿಸಿರುವ ಅಥಣಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read