ಬೆಂಗಳೂರಲ್ಲಿ ಪೇದೆಯಿಂದ ನೈತಿಕ ಪೊಲೀಸ್ ಗಿರಿ; ಸ್ನೇಹಿತನ ಜೊತೆ ಕೂತಿದ್ದ ಯುವತಿಯಿಂದ ಹಣ ಸುಲಿಗೆ ಯತ್ನ

ಪೊಲೀಸರೊಬ್ಬರು ನೈತಿಕ ಪೊಲೀಸ್‌ಗಿರಿ ನಡೆಸಿ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅರ್ಷಾ ಲತೀಫ್ ಎಂಬ ಯುವತಿ ಘಟನೆಯ ಬಗ್ಗೆ ದೂರು ನೀಡಿದ್ದು, ಜನವರಿ 29 ರಂದು ನಡೆದ ಘಟನೆಗೆ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಆಘಾತಕಾರಿ ಅನುಭವವಾಗಿದೆ. ಜನವರಿ 29 ರಂದು ಮಧ್ಯಾಹ್ನದ ಸಮಯದಲ್ಲಿ, ನನ್ನ ಸ್ನೇಹಿತ ಮತ್ತು ನಾನು ನೆರಳಿನಲ್ಲಿ ಕುಳಿತು ಕುಂದನಹಳ್ಳಿ ಕೆರೆಗೆ ಭೇಟಿ ನೀಡಿದ್ದೆವು. ಓರ್ವ ಪೊಲೀಸ್ ಈ ವೇಳೆ ನಮ್ಮ ಫೋಟೋಗಳನ್ನು ಕ್ಲಿಕ್ಕಿಸಲು ಪ್ರಾರಂಭಿಸಿದರು. ಮತ್ತು ನಮಗೆ ಅಲ್ಲಿ ಕುಳಿತುಕೊಳ್ಳಲು ಅನುಮತಿ ಇಲ್ಲ ಎಂದು ಕಿರುಕುಳ ನೀಡಲು ಪ್ರಾರಂಭಿಸಿದರು. ಅಂತಿಮವಾಗಿ ನಾವು ಅಲ್ಲಿಂದ ಹೋಗಲು ನಮ್ಮ ಬಳಿ ಅವರು 1,000 ರೂಪಾಯಿ ಕೇಳಿದರು ಎಂದು ಯುವತಿ ದೂರಿದ್ದಾರೆ.

ಇಂತಹ ನಡವಳಿಕೆಯಿಂದ ಸಂಪೂರ್ಣವಾಗಿ ದಿಗ್ಭ್ರಮೆಗೊಂಡೆ. ಅಕ್ಷರಶಃ ಯಾವುದೇ ತಪ್ಪು ಮಾಡದ ನಾವು ಈ ನೈತಿಕ ಪೊಲೀಸ್‌ಗಿರಿಯನ್ನು ಏಕೆ ಸಹಿಸಿಕೊಳ್ಳಬೇಕಾಗಿತ್ತು? ಸಾರ್ವಜನಿಕ ಪ್ರದೇಶದಲ್ಲಿ ಅನುಮತಿ ಇಲ್ಲದೆ ಕುಳಿತಿದ್ದಕ್ಕಾಗಿ ಇಬ್ಬರಿಗೆ ಕಿರುಕುಳ ನೀಡುವ ಹಕ್ಕು ಮತ್ತು ಅವರು ಒಂದೇ ಲಿಂಗದವರಲ್ಲ ಎಂಬ ಕಾರಣಕ್ಕೆ ಹಣವನ್ನು ಪಡೆದುಕೊಳ್ಳುವ ಹಕ್ಕು ತನಗೆ ಇದೆ ಎಂದು ಈ ಪೋಲೀಸರು ಏಕೆ ಭಾವಿಸಿದರು ? ಅವರ ನಂಬರ್ ಪ್ಲೇಟ್‌ನ ಚಿತ್ರವನ್ನು ಲಗತ್ತಿಸಿ ಮತ್ತು ಬೆಂಗಳೂರು ನಗರ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಅರ್ಷಾ ಟ್ವೀಟ್ ಮಾಡಿದ್ದಾರೆ.

https://twitter.com/Madrassan_Pinky/status/1620334899495579648

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read