‘ಫೋಟೋ ಲೀಕ್’ ಮಾಡಿದ ಖೈದಿ ವೇಲುಗೆ ಹಿಗ್ಗಾಮುಗ್ಗಾ ಥಳಿಸಿದ ‘ವಿಲ್ಸನ್ ಗಾರ್ಡನ್ ನಾಗ’..?

ಬೆಂಗಳೂರು : ಫೋಟೋ ಲೀಕ್ ಮಾಡಿದ ಖೈದಿ ವೇಲುಗೆ ವಿಲ್ಸನ್ ಗಾರ್ಡನ್ ನಾಗ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಕೆಲವು ರೌಡಿಶೀಟರ್ ಗಳ ಜೊತೆ ಕುಳಿತು ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದ್ದವು. ಇದನ್ನು ನೀನೆ ತೆಗೆದು ಮಾಧ್ಯಮಗಳಿಗೆ ಕಳುಹಿಸಿದ್ದೀಯಾ ಎಂದು ನಾಗ ಸೇರಿ ಒಂದಷ್ಟು ಮಂದಿ ಖೈದಿ ವೇಲುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಸಿದ್ದಾಪುರ ಮಹೇಶನ ಕೊಲೆ ಕೇಸ್ ನಲ್ಲಿ ರೌಡಿ ವೇಲು ಜೈಲು ಸೇರಿದ್ದನು.

ನಟ ಚೇತನ್ ಅಹಿಂಸಾ ಪೋಸ್ಟ್

ವೈರಲ್ ಆಗಿರುವ ಫೋಟೋದಲ್ಲಿ ನಟ ದರ್ಶನ್ರ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಭೂಗತ ವ್ಯಕ್ತಿಯು ಚಿತ್ರವನ್ನು ಸೋರಿಕೆ ಮಾಡಿದ ಕೈದಿಯನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಜೈಲಿನಲ್ಲಿ ವಿಶೇಷ ವಿಐಪಿ ಸವಲತ್ತುಗಳನ್ನು ಪಡೆಯುವುದಲ್ಲದೆ, ಜೈಲನ್ನು ತನ್ನ ಆಸ್ತಿಯಂತೆ ನಡೆಸುತ್ತಿರುವ  ಈ ರೌಡಿಗಳು ಯಾರು?ಗೃಹ ಸಚಿವ ಪರಮೇಶ್ವರ್ ಅವರು ನಮ್ಮ ದೋಷಪೂರಿತ ಕರ್ನಾಟಕ ಜೈಲು ವ್ಯವಸ್ಥೆಯನ್ನು ಸಕ್ರಿಯವಾಗಿ ಸುಧಾರಿಸಬೇಕು ಎಂದು ನಟ ಚೇತನ್ ಅಹಿಂಸಾ ಪೋಸ್ಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read