ಚಿಕ್ಕಮಗಳೂರು: ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಪತಿ ಮಹಾಶಯ ಪತ್ನಿಯನ್ನೇ ಇರುದು ಕೊಂದುರುವ ಘಟನೆ ಚಿಕ್ಕಮಗಳೂರ್ ಜಿಲ್ಲೆಯ ಆಲ್ದೂರಿನ ಹೊಸಳ್ಳಿಯಲ್ಲಿ ನಡೆದಿದೆ.
ನೇತ್ರಾ ಹತ್ಯೆಯಾದ ಮಹಿಳೆ. ಪತಿ ನವೀನ್ ಪತ್ನಿಯನ್ನೇ ಕೊಲೆಗೈದಿದ್ದಾನೆ. ಐದು ತಿಂಗಳ ಹಿಂದಷ್ಟೇ ನೇತ್ರಾ ಹಾಗೂ ನವೀನ್ ಮದುವೆಯಾಗಿದ್ದರು. ಈಗ ಚಾಕುವಿನಿಂದ ಪತ್ನಿಯನ್ನು ಮನಬಂದಂತೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚ್ಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.