ಸಂಚಾರ ದಟ್ಟಣೆಯಿಂದ ತುಂಬಿದ್ದ ರಸ್ತೆಯನ್ನು ದಾಟಲು ಹೆಣಗಾಡುತ್ತಿದ್ದ ವಿಕಲ ಚೇತನರಿಗೆ ರಸ್ತೆ ದಾಟಲು ನೆರವಾಗುವ ಮೂಲಕ ಬೆಂಗಳೂರಿನ ಹೆಣ್ಣೂರು ಕ್ರಾಸ್ ಅಂಡರ್ ಪಾಸ್ನಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಪ್ರದರ್ಶಿಸಿದ್ದಾರೆ.
ಮಾನವೀಯತೆ ಪ್ರದರ್ಶಿಸಿದ ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಯನ್ನು ಎಸ್. ನಾಗರಾಜ್ ಎಂದು ಗುರುತಿಸಲಾಗಿದೆ. ಜನನಿಬಿಡ ರಸ್ತೆಯನ್ನು ದಾಟುತ್ತಿದ್ದ ವಿಕಲಚೇತನ ವ್ಯಕ್ತಿಯೊಂದಿಗೆ ತಾನೂ ಸಂಚರಿಸುವ ಮೂಲಕ ಪಕ್ಕದ ರಸ್ತೆಗೆ ದಾಟಿಸಿದ್ದಾರೆ. ಈ ವಿಡಿಯೋವನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.
ಇದು ನನ್ನ ಬೆಂಗಳೂರು ಟ್ರಾಫಿಕ್ ಪೊಲೀಸ್ ಅಂತಾ ಎಕ್ಸ್ನಲ್ಲಿ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇದನ್ನು ಬೆಂಗಳೂರು ಸಂಚಾರ ಪೊಲೀಸ್ ಠಾಣೆ ಅಧಿಕಾರಿ ಶ್ರೀರಾಮ್ ಬಿಷ್ಣೋಯ್ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಗುಡ್ ರೆಸ್ಪಾನ್ಸ್ ಸಿಕ್ಕಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆಯೇ ಕೆಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣೆ ಪ್ರತಿಕ್ರಿಯಿಸಿದೆ. ನಮ್ಮ ಸಿಬ್ಬಂದಿಯ ಉತ್ತಮ ಕೆಲಸವನ್ನು ಗುರುತಿಸಿದ್ದಕ್ಕೆ ಹಾಗೂ ಶ್ಲಾಘಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ . ಅಲ್ಲದೇ ಇಂತಹ ಮೆಚ್ಚುಗೆಗಳು ನಮಗೆ ಇನ್ನಷ್ಟು ಇಂಥಹ ಕೆಲಸಗಳನ್ನು ಮಾಡಲು ಪ್ರೇರಪಿಸುತ್ತದೆ ಎಂದೂ ಸಹ ಟ್ವೀಟ್ನಲ್ಲಿ ತಿಳಿಸಲಾಗಿದೆ.
https://twitter.com/i/status/1697567817934205042