ಬಿಜೆಪಿಯ ದಲಿತ ಕಾರ್ಯಕರ್ತೆ ಮನೆಯಲ್ಲಿ ಉಪಹಾರ ಸೇವನೆ ಮಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಭಾರತೀಯ ಜನತಾ ಪಕ್ಷದ ಬೂತ್ ಮಟ್ಟದ ದಲಿತ ಕಾರ್ಯಕರ್ತೆ ಸುಜಾತಾ ಅವರ ನಿವಾಸದಲ್ಲಿ ಉಪಹಾರ ಸೇವಿಸಿದರು. ಜೈಶಂಕರ್ ಅವರು ನೆಲದ ಮೇಲೆ ಕುಳಿತು ಬಿಜೆಪಿಯ ಇತರ ಕಾರ್ಯಕರ್ತರೊಂದಿಗೆ ಉಪಹಾರ ಸೇವಿಸಿದ್ದಾರೆ.

ತಮ್ಮ ಮನೆಗೆ ಅಂತಹ ಗಣ್ಯರ ಭೇಟಿಯ ಬಗ್ಗೆ ತಿಳಿದಾಗ ಸಂತೋಷವಾಯಿತು ಎಂದು ಸುಜಾತಾ ಅವರು ಹೇಳಿದರು. ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಗೌರವಾರ್ಥ ಭಾರತೀಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗಿತ್ತು.

ಜೂನ್ 11 ರಿಂದ 13 ರವರೆಗೆ ನಡೆಯಲಿರುವ ಜಿ 20 ಅಭಿವೃದ್ಧಿ ಸಚಿವರ ಸಭೆಯಲ್ಲಿ ಭಾಗವಹಿಸಲು ಜೈಶಂಕರ್ ಶನಿವಾರ ವಾರಣಾಸಿಗೆ ಆಗಮಿಸಿದರು.

https://twitter.com/ANINewsUP/status/1667750097780883456?ref_src=twsrc%5Etfw%7Ctwcamp%5Etweetembed%7Ctwterm%5E1667750097780883456%7Ctwgr

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read