ಬೆಂಗಳೂರು: ಕರ್ನಾಟಕದಲ್ಲಿ ಜೈನ ಮುನಿ ಆಚಾರ್ಯ ಶಾಂತಿ ಸಾಗರ್ ಮಹಾರಾಜ್ ಅವರಿಗೆ ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಗೌರವ ಸಲ್ಲಿಸಿದರು.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಭೇಟಿಗಾಗಿ ಇಂದು ಕರ್ನಾಟಕಕ್ಕೆ ಆಗಮಿಸಿದರು. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಭಾರೀ ಕೈಗಾರಿಕೆಗಳು ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಇತರ ಗಣ್ಯರು ಬೆಂಗಳೂರಿನಲ್ಲಿ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ರಾಧಾಕೃಷ್ಣನ್ ಹೇಳಿದ್ದಾರೆ. ಉಪರಾಷ್ಟ್ರಪತಿಗಳು ಆಗಮಿಸಿದಾಗ ಅವರಿಗೆ ಗೌರವ ರಕ್ಷೆಯನ್ನೂ ನೀಡಲಾಯಿತು.
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜೈನ ಮುನಿ ಆಚಾರ್ಯ ಶಾಂತಿ ಸಾಗರ್ ಮಹಾರಾಜ್ ಅವರ ಸ್ಮರಣಾರ್ಥ ಸಭೆಯಲ್ಲಿ ಮಾತನಾಡಿದ ರಾಧಾಕೃಷ್ಣನ್, ಭಾರತದ ಆಧ್ಯಾತ್ಮಿಕ ಪ್ರಯಾಣ ಮತ್ತು ಪರಂಪರೆಗೆ ಜೈನ ತತ್ವಶಾಸ್ತ್ರದ ಆಳವಾದ ಕೊಡುಗೆಯನ್ನು ಸ್ಮರಿಸಿ, ಸಂಗಮ ಮತ್ತು ಸಂಗಮೋತ್ತರ ಅವಧಿಯಲ್ಲಿ ತಮಿಳು ಸಾಹಿತ್ಯಕ್ಕೆ ಜೈನ ಸನ್ಯಾಸಿಗಳು ಮತ್ತು ವಿದ್ವಾಂಸರು ನೀಡಿದ ಅಮೂಲ್ಯ ಕೊಡುಗೆಗಳನ್ನು ಅವರು ತಿಳಿಸಿದ್ದಾರೆ.
ಭಾರತೀಯ ಸಮಾಜದ ಆಧ್ಯಾತ್ಮಿಕ ನೀತಿಯನ್ನು ಆಳವಾಗಿ ಪ್ರಭಾವಿಸಿರುವ ಜೈನ ಧರ್ಮದ ಮೂಲ ತತ್ವಗಳಾದ ಅಹಿಂಸೆ, ಸ್ವಯಂ ಸಂಯಮ ಮತ್ತು ತ್ಯಾಗದ ಮಹತ್ವದ ಬಗ್ಗೆ ತಿಳಿಸಿದರು. ಆಚಾರ್ಯ ಶಾಂತಿ ಸಾಗರ್ ಮಹಾರಾಜ್ ಬಗ್ಗೆ ಮಾತನಾಡುತ್ತಾ, ಆಚಾರ್ಯ ಶಾಂತಿ ಸಾಗರ್ ಮಹಾರಾಜ್ ಅವರ ಆಂತರಿಕ ಶಾಂತಿ ಮತ್ತು ಮೋಕ್ಷಕ್ಕಾಗಿ ಅನ್ವೇಷಣೆಯು ಜನರನ್ನು ಪ್ರೇರೇಪಿಸುತ್ತಿದೆ. ಲೌಕಿಕ ಜೀವನವನ್ನು ತ್ಯಜಿಸಿದ ನಂತರ ಚಕ್ರವರ್ತಿ ಚಂದ್ರಗುಪ್ತ ಮೌರ್ಯರು ತಮ್ಮ ಅಂತಿಮ ವರ್ಷಗಳನ್ನು ಶ್ರವಣಬೆಳಗೊಳದಲ್ಲಿ ಕಳೆದರು. ಯುದ್ಧ ಮತ್ತು ಸಂಘರ್ಷದಿಂದ ಛಿದ್ರಗೊಂಡ ಜಗತ್ತಿನಲ್ಲಿ, ಜೈನ ಧರ್ಮದ ಶಾಂತಿ ಮತ್ತು ಸಾಮರಸ್ಯದ ಸಂದೇಶವು ಇಂದು ಇನ್ನೂ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ ಎಂದು ಅವರು ಹೇಳಿದರು.
ಪ್ರಾಕೃತವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದ್ದಕ್ಕಾಗಿ ಮತ್ತು ಜೈನ ಧರ್ಮಕ್ಕೆ ಸೇರಿದ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಡಿಜಿಟಲೀಕರಣಗೊಳಿಸುವ ಧ್ಯೇಯವನ್ನು ಪ್ರಾರಂಭಿಸಿದಕ್ಕಾಗಿ ಉಪರಾಷ್ಟ್ರಪತಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
