ಉತ್ತರ ಪ್ರದೇಶದ ಮಿರತ್ ಜಿಲ್ಲೆಯಲ್ಲಿ ರೈಲು ಟಿಕೆಟ್ ಖರೀದಿಯ ವಿಚಾರವಾಗಿ ಸಿಆರ್ಪಿಎಫ್ (CRPF) ಯೋಧರೊಬ್ಬರ ಮೇಲೆ ಕನ್ವರಿಯಾಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ಕನ್ವರಿಯಾಗಳು ಯೋಧನನ್ನು ನೆಲಕ್ಕೆ ಕೆಡವಿ, ಒದೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಬ್ರಹ್ಮಪುತ್ರ ಮೇಲ್ ಹತ್ತಲು ಹೊರಟಿದ್ದ ಸಿಆರ್ಪಿಎಫ್ ಯೋಧನ ಮೇಲೆ ಈ ಹಲ್ಲೆ ನಡೆದಿದೆ. ಘಟನೆ ನಡೆದ ಕೂಡಲೇ ರೈಲ್ವೆ ರಕ್ಷಣಾ ಪಡೆ (RPF) ತಕ್ಷಣ ಕ್ರಮ ಕೈಗೊಂಡು ಏಳು ಮಂದಿ ಹಲ್ಲೆಕೋರರನ್ನು ಬಂಧಿಸಿದೆ. ಪ್ರಾಥಮಿಕ ತನಿಖೆ ಬಳಿಕ ಕನ್ವರಿಯಾಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. “ಸಿಆರ್ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಏಳು ಮಂದಿ ಕನ್ವರಿಯಾಗಳನ್ನು ಬಂಧಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಜಫ್ಫರ್ನಗರದಲ್ಲಿ ಸೈಲೆನ್ಸರ್ ಇಲ್ಲದ ಬೈಕ್ಗಳ ವಿರುದ್ಧ ಪೊಲೀಸರ ಕ್ರಮ
ಈ ನಡುವೆ, ಮುಜಫ್ಫರ್ನಗರದಲ್ಲಿ ಸೈಲೆನ್ಸರ್ ಇಲ್ಲದ ಮೋಟರ್ಸೈಕಲ್ಗಳನ್ನು ಬಳಸುತ್ತಿದ್ದ ಕನ್ವರಿಯಾಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಸ್ಪಿ-ಸಿಟಿ ಸತ್ಯನಾರಾಯಣ ಪರಾಜಪತ್ ಮಾತನಾಡಿ, ಸೈಲೆನ್ಸರ್ ಇಲ್ಲದ ಮೋಟರ್ಸೈಕಲ್ಗಳನ್ನು ಬಳಸದಂತೆ ಕನ್ವರಿಯಾಗಳಿಗೆ ಸೂಚಿಸಲಾಗಿದೆ. ಮಾರ್ಪಡಿಸಿದ ಸೈಲೆನ್ಸರ್ಗಳನ್ನು ಒದಗಿಸುತ್ತಿದ್ದ ‘ಹನಿ’ ಎಂಬ ಅಂಗಡಿಯವರನ್ನು ಬಂಧಿಸಲಾಗಿದ್ದು, ಅವರಿಂದ 12 ಮಾರ್ಪಡಿಸಿದ ಸೈಲೆನ್ಸರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೈಲೆನ್ಸರ್ ಇಲ್ಲದೆ ಸಂಚರಿಸುತ್ತಿದ್ದ 15ಕ್ಕೂ ಹೆಚ್ಚು ಮೋಟರ್ಸೈಕಲ್ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
मिर्ज़ापुर स्टेशन पर कांवड़ियों ने एक फौजी को पीटा।
— ashokdanoda (@ashokdanoda) July 19, 2025
जिस जवान ने सीमा पर खून बहाया, उसे अपने ही देश में आस्था के नाम पर थप्पड़ मिले।
देशभक्ति टीवी पर बची है, ज़मीन पर नहीं pic.twitter.com/7S7q8GnDKD