Video | ಭೂಕುಸಿತದಿಂದ ಬಂದ್ ಆದ ಶ್ರೀನಗರ – ಜಮ್ಮು ಹೆದ್ದಾರಿ

ಸುರಂಗವೊಂದರ ಮೇಲೆ ಭಾರೀ ಕಲ್ಲುಗಳು ಬಿದ್ದ ಕಾರಣ ಜಮ್ಮು-ಶ್ರೀನಗರ ಹೆದ್ದಾರಿಯ ಸಂಚಾರದಲ್ಲಿ ವ್ಯತ್ಯಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಇಲ್ಲಿನ ರಾಮ್ಬನ್ ಜಿಲ್ಲೆಯ ಪಂತ್ಯಾಲ್ ಪ್ರದೇಶದ ಟಿ5 ಸುರಂಗದ ಮೇಲೆ ಈ ರೀತಿ ಆಗಿದೆ. ಮೇಲಿಂದ ಬೀಳುತ್ತಿರುವ ಕಲ್ಲುಗಳು ಹೆದ್ದಾರಿಯನ್ನು ಹಾನಿ ಪಡಿಸುತ್ತಿರುವ ವಿಡಿಯೋಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ.

ಹಿಮಾಲಯದ ಗುಡ್ಡವೊಂದರ ಮೇಲಿಂದ ಕಲ್ಲುಗಳು ಹಾಗೂ ಬಂಡೆಗಳು ಭಾರೀ ವೇಗದಲ್ಲಿ ಕುಸಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಕೆಲ ಕಲ್ಲುಗಳು ರಸ್ತೆಯ ಮೇಲೆ ಬಿದ್ದು ರಸ್ತೆ ಬ್ಲಾಕ್ ಮಾಡಿವೆ. ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಸಂಭವಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read