ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ತರಕಾರಿ ಬೆಲೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ತರಕಾರಿ ಬೆಲೆ ಭಾರಿ ದುಬಾರಿಯಾಗಿದೆ.

ಬೀನ್ಸ್ ದರ ಕೆಜಿಗೆ 200 ರೂಪಾಯಿ ತಲುಪಿದೆ. ಬಿಳಿ ಬದನೆಕಾಯಿ 66 ರೂ., ಬಾಟಲ್ ಬದನೆ 60 ರೂ.,  ಸೌತೆಕಾಯಿ 48 ರೂ., ನುಗ್ಗೆಕಾಯಿ 44 ರೂ., ಬೆಳ್ಳುಳ್ಳಿ 294 ರೂ., ಹಾಗಲಕಾಯಿ 59 ರೂ., ಬೆಂಡೆಕಾಯಿ 60 ರೂ. ವರೆಗೆ ಏರಿಕೆಯಾಗಿದೆ.

ಸೊಪ್ಪುಗಳ ದರ ಕೂಡ ಭಾರಿ ಏರಿಕೆಯಾಗಿದೆ ನಾಟಿ ಕೊತಂಬರಿಸೊಪ್ಪು ಕಂತೆಗೆ 25 ರೂ. ವರೆಗೆ ಮಾರಾಟವಾಗಿದೆ. ದಂಟು, ಪಾಲಕ್, ಮೆಂತೆ ಸೊಪ್ಪಿನ ದರ 20ರಿಂದ 25 ರೂ.ವರೆಗೆ ಏರಿಕೆಯಾಗಿದೆ. ತೆಂಗಿನ ಕಾಯಿ ದರ 40 ರಿಂದ 54 ರೂ. ವರೆಗೆ ಏರಿಕೆ ಕಂಡಿದೆ. ಮಧ್ಯಮ ಗಾತ್ರದ ತೆಂಗಿನ ಕಾಯಿ 33 ರೂ., ಸಣ್ಣಗಾತ್ರದ ತೆಂಗಿನಕಾಯಿ 20 ರಿಂದ 30ರವರೆಗೆ ಮಾರಾಟವಾಗುತ್ತಿದೆ.

ಬೆಂಗಳೂರು ಯಶವಂತಪುರ ಎಪಿಎಂಸಿಯಲ್ಲಿ ಬೀನ್ಸ್ ಸಗಟು ತರ 140 ರಿಂದ 150 ರೂ.ಇದೆ. ಚಿಲ್ಲರೆ ದರ 180- 200 ರೂ. ವರೆಗೆ ಇದೆ. ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆಯಾಗಿರುವುದು, ಇಳುವರಿ ಕುಂಠಿತ, ಬೇಡಿಕೆ ಕುಸಿತ ಪರಿಣಾಮ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read