ಮಾಜಿ ಸಚಿವ ವಿ. ಸೋಮಣ್ಣ ಮನವೊಲಿಕೆಗೆ ಬಿಜೆಪಿ ಯತ್ನ: ಜ. 4 ರಂದು ಅಶೋಕ್ ಭೇಟಿ

ಬೆಂಗಳೂರು: ಮಾಜಿ ಸಚಿವ ವಿ. ಸೋಮಣ್ಣ ಮನವೊಲಿಕೆಗೆ ಬಿಜೆಪಿ ಕ್ರಮ ಕೈಗೊಂಡಿದೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಜನವರಿ 4ರಂದು ಸೋಮಣ್ಣನವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ದೂರವಾಣಿ ಮೂಲಕ ಸೋಮಣ್ಣ ಅವರನ್ನು ಸಂಪರ್ಕಿಸಿ ಜನವರಿ 4ರಂದು ಭೇಟಿ ಮಾಡುವುದಾಗಿ ಅಶೋಕ್ ತಿಳಿಸಿದ್ದು, ಇದಕ್ಕೆ ಸೋಮಣ್ಣ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಸೋಮಣ್ಣ ಮುನಿಸು ಹೀಗೆ ಮುಂದುವರೆದಲ್ಲಿ ಮುಂದೆ ಪಕ್ಷಕ್ಕೆ ಸಮಸ್ಯೆ ಆಗಲಿದೆ ಎಂಬುದನ್ನು ಅರಿತಿರುವ ಅಶೋಕ್ ಮಾತುಕತೆ ಮೂಲಕ ಮನವೊಲಿಸಲು ಮುಂದಾಗಿದ್ದಾರೆ. ಮಾಜಿ ಸಚಿವ ಶಿವನಗೌಡ ನಾಯಕ್ ಭಾನುವಾರ ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸೋಮಣ್ಣ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read