ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾರಿಗೆ ಗೌರವಾರ್ಥವಾಗಿ ನಿರ್ಮಿಸಲಾಗಿದ್ದ ಪ್ರತಿಮೆಯ ಕೈಯಲ್ಲಿದ್ದ ಜಾವೆಲಿನ್ನ್ನೇ ಯಾರೋ ಕಳ್ಳತನ ಮಾಡಿರುವ ಘಟನೆಯೊಂದು ಮೀರತ್ನಲ್ಲಿ ಸಂಭವಿಸಿದೆ. ಹಾಪುರ್ ಬೇಸ್ನಲ್ಲಿ ಸ್ಪೋರ್ಟ್ಸ್ ಸಿಟಿ ಪ್ರಮೋಷನ್ನಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಪ್ರತಿಮೆಯ ಕೈಯಲ್ಲಿ ಜಾವೆಲಿನ್ ಮಾಯವಾಗಿದೆ.
ಮಾರುಕಟ್ಟೆ ಹೃದಯಭಾಗದಲ್ಲಿಯೇ ಈ ಪ್ರತಿಮೆಯಿದ್ದು ರಾತ್ರಿ ವೇಳೆಯಲ್ಲಿ ಯಾರೋ ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಒಲಂಪಿಕ್ನಲ್ಲಿ ಟ್ರ್ಯಾಕ್ & ಫೀಲ್ಡ್ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಮೊದಲ ಆಟಗಾರ ಎಂಬ ಕೀರ್ತಿಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಇದರ ಗೌರವಾರ್ಥವಾಗಿ ಚಿನ್ನದ ಬಣ್ಣದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು.
ಒಂದು ಅಂತಸ್ತಿನ ಮನೆಯಷ್ಟು ಎತ್ತರದ ಪ್ರತಿಮೆ ಇದಾಗಿದ್ದು ಇಷ್ಟು ಎತ್ತರದ ಪ್ರತಿಮೆಯಿಂದ ಜಾವೆಲಿನ್ ಯಾರು ಕದ್ದಿರಬಹುದು ಅಂತಾ ಪೊಲೀಸರು ಹಾಗೂ ಸ್ಥಳೀಯರು ತಲೆಕೆಡಿಸಿಕೊಂಡಿದ್ದಾರೆ. ಅಚ್ಚರಿ ಅಂದರೆ ಪ್ರತಿಮೆಯ ಹಿಂದೆಯೇ ಸಿಸಿ ಕ್ಯಾಮರಾ ಇದ್ದು ದುಷ್ಕರ್ಮಿಗಳು ಸಿಸಿ ಕ್ಯಾಮರಾ ಕಣ್ತಪ್ಪಿಸಿ ಜಾವೆಲಿನ್ ಕದಿಯೋಕೆ ಸಾಧ್ಯವೇ ಇಲ್ಲ. ಆದರೂ ಈ ಜಾವೆಲಿನ್ ಎಲ್ಲಿ ಮಾಯವಾಯ್ತು ಎಂಬ ಕುತೂಹಲ ಹೆಚ್ಚಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
https://twitter.com/i/status/1698944204708483212