ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿಯಿಂದ ಲೇಪನ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಆನ್ ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾಲೇಜು ಪ್ರಾಂಶುಪಾಲರಾದ ಪ್ರತ್ಯುಶ್ ವತ್ಸಲಾ ಅವರು ತರಗತಿಯ ಗೋಡೆಗಳಿಗೆ ಶಾಖವನ್ನು ತಡೆಯಲು ಹಸುವಿನ ಸಗಣಿಯಿಂದ ಲೇಪನ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರು – ಇದು ಒಳಾಂಗಣ ತಾಪಮಾನವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ ಎಂದು ನಂಬಲಾದ ಹಳೆಯ ಗ್ರಾಮೀಣ ಅಭ್ಯಾಸವಾಗಿದೆ
ಕುಸಿಯುತ್ತಿರುವ ಮೂಲಸೌಕರ್ಯಗಳ ನಡುವೆ ಪರಿಸರ ಸ್ನೇಹಿ ಪರಿಹಾರಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶವನ್ನು ಹೊಂದಿರುವ ಈ ಕ್ರಮವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಕಾಲೇಜಿನ ಆಂತರಿಕ ಶಿಕ್ಷಕರ ವಾಟ್ಸಾಪ್ ಗುಂಪಿನಲ್ಲಿ ವತ್ಸಲಾ ಹಂಚಿಕೊಂಡಿದ್ದಾರೆ. ಮತ್ತು ಇದು ಭಾರಿ ವೈರಲ್ ಆಗಿದೆ.
Principal in Delhi University applying Cow dung (Gobar) on the walls of classroom
— 𝗩eena Jain (@DrJain21) April 14, 2025
Sanghis have systematically k!lled Scientific Temperament & Piyush Goyal wonder why there's no Technology & innovation based start-ups in India 🤡
pic.twitter.com/JT0XQq9vc2