ಅರ್ಧ ಶತಮಾನದಿಂದ ಪ್ರೀತಿ, ವಿಶ್ವಾಸದ ಅವಿನಾಭಾವ ಸಂಬಂಧವಿದೆ: ರಾಯ್ ಬರೇಲಿ ಜನತೆಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ

ನವದೆಹಲಿ: ರಾಯ್ ಬರೇಲಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಹಿನ್ನಲೆಯಲ್ಲಿ ರಾಯ್ ಬರೇಲಿ ಜನರಿಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ ಕಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ನನ್ನ ತಾಯಿ ಸೋನಿಯಾ ಗಾಂಧಿ ನನ್ನ ಕುಟುಂಬ ದೆಹಲಿಯಲ್ಲಿ ಅಪೂರ್ಣವಾಗಿದೆ ಎಂದು ಹೇಳಿದ್ದರು. ದಶಕಗಳ ಕಾಲ ಸುಖ, ದುಃಖ, ಬಿಕ್ಕಟ್ಟು, ಹೋರಾಟದಲ್ಲಿ ರಾಯ್ ಬರೇಲಿ ಜನ ಜೊತೆಯಾಗಿದ್ದಾರೆ. ರಾಯ್ ಬರೇಲಿ ಜನತೆಯೊಂದಿಗೆ ಪ್ರೀತಿ ಮತ್ತು ವಿಶ್ವಾಸದ ಸಂಬಂಧವಿದೆ. ಇದು ಸೇವೆ ಮತ್ತು ನಂಬಿಕೆಯ ಸಂಬಂಧವೂ ಆಗಿದೆ ಎಂದು ತಿಳಿಸಿದ್ದಾರೆ.

ರಾಯ್ ಬರೇಲಿಯ ಸಂಬಂಧ ಅರ್ಥ ಶತಮಾನದಿಂದ ಅವಿನಾಭಾವವಾಗಿದೆ. ಇಲ್ಲಿ ನಾವು ಪಡೆದ ಪ್ರೀತಿ, ಆತ್ಮೀಯತೆ ಗೌರವಕ್ಕೆ ಬೆಲೆ ಕಟ್ಟಲಾಗದು. ನಿಮ್ಮ ಪ್ರೀತಿಯ ಋಣ ಎಂದಿಗೂ ತೀರಿಸಲಾಗುವುದಿಲ್ಲ, ಬೆಲೆ ಕಟ್ಟಲಾಗುವುದಿಲ್ಲ.  ಸಂಕಷ್ಟದ ಸಮಯದಲ್ಲಿ, ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗೆ ನಮ್ಮ ಇಡೀ ಕುಟುಂಬದ ಹೋರಾಟದಲ್ಲಿ ನಮ್ಮೊಂದಿಗೆ ದೃಢವಾಗಿ ರಾಯ್ ಬರೇಲಿ ನಿಂತಿದೆ ಎಂದು ಹೇಳಿದ್ದಾರೆ.

ಸಾವಿರಾರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರಿಗೆ ಆಶೀರ್ವದಿಸುವಂತೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಪತ್ರ ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read