ಕೊರತೆ ಹಿನ್ನಲೆ ಪೆಟ್ರೋಲ್, ಡೀಸೆಲ್ ಮಾರಾಟಕ್ಕೆ ನಿರ್ಬಂಧ: ಬೈಕ್ ಗೆ 200 ರೂ., ಕಾರ್ ಗೆ 500 ರೂ.ವರೆಗೆ ಮಾತ್ರ ಪೆಟ್ರೋಲ್

 ಅಗರ್ತಲಾ: ತ್ರಿಪುರಾ ಸರ್ಕಾರ ಬುಧವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ನಿರ್ಬಂಧ ಹೇರಿದೆ. ಸರಕು ಸಾಗಣೆ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿ ಈಶಾನ್ಯ ರಾಜ್ಯದಲ್ಲಿ ಇಂಧನ ದಾಸ್ತಾನು ಕಡಿಮೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಅಸ್ಸಾಂನ ಜಟಿಂಗಾದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ತ್ರಿಪುರಾಗೆ ಸರಕು ರೈಲುಗಳ ಸಂಚಾರಕ್ಕೆ ಪರಿಣಾಮ ಬೀರಿದೆ. ಪುನಃಸ್ಥಾಪನೆ ಕಾರ್ಯದ ನಂತರ ಏಪ್ರಿಲ್ 26 ರಂದು ಪ್ಯಾಸೆಂಜರ್ ರೈಲು ಸಂಚಾರ ಪ್ರಾರಂಭವಾಯಿತು ಆದರೆ, ಜಟಿಂಗ ಮೂಲಕ ರೈಲು ಸೇವೆಯು ರಾತ್ರಿಯ ಸಮಯದಲ್ಲಿ ಇನ್ನೂ ಆರಂಭವಾಗಿಲ್ಲ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ದಿನಕ್ಕೆ 200 ರೂ., ನಾಲ್ಕು ಚಕ್ರದ ವಾಹನಗಳಿಗೆ ದಿನಕ್ಕೆ 500 ರೂ.ನಂತೆ ಪೆಟ್ರೋಲ್ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.

ಪೆಟ್ರೋಲ್ ಪಂಪ್‌ ಗಳಿಗೆ ದಿನಕ್ಕೆ ಒಂದು ಬಸ್‌ಗೆ ಕೇವಲ 60 ಲೀಟರ್ ಡೀಸೆಲ್ ಮಾರಾಟ ಮಾಡಲು ತಿಳಿಸಲಾಗಿದೆ, ಮಿನಿ ಬಸ್‌ಗಳಿಗೆ 40 ಲೀಟರ್ ಮತ್ತು ಆಟೋರಿಕ್ಷಾ ಮತ್ತು ತ್ರಿಚಕ್ರ ವಾಹನಗಳಿಗೆ ದಿನಕ್ಕೆ 15 ಲೀಟರ್ ಮಾರಾಟ ಮಾಡಲು ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read