ರಾತ್ರೋರಾತ್ರಿ ರೈಲ್ವೆ ಹಳಿ ಕಂಬಿಗಳನ್ನೇ ದೋಚಿದ ಕಳ್ಳರು

ಬೆಂಗಳೂರು: ರೈಲ್ವೆ ಹಳಿಯ ಕಂಬಿಗಳನ್ನು ರಾತ್ರಿ ವೇಳೆ ಕಳವು ಮಾಡಿ ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ತಮಿಳುನಾಡಿಗೆ ಹೊಸ ರೈಲ್ವೆ ಹಳಿ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಕಾರ್ ಮಿಲಾರಾಮ್ ರೈಲು ನಿಲ್ದಾಣದ ಬಳಿ ಸಂಗ್ರಹಿಸಿದ್ದ ಕಂಬಿಗಳನ್ನು ಗೂಡ್ಸ್ ವಾಹನಗಳಲ್ಲಿ ಸಾಗಾಟ ಮಾಡಲಾಗಿದೆ. ಪೊಲೀಸರು ವಾಹನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಯುವಕರು ಕಂಬಿಗಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದರು. ವಾಹನದ ಮಾಲೀಕ ಪೆರಿಯಣ್ಣನ್ ಎಂಬುದು ಗೊತ್ತಾಗಿದೆ. ಕಂಬಿಗಳನ್ನು ಗುಜರಿಗೆ ಸಾಗಾಟ ಮಾಡಿ ಅಲ್ಲಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ರವಾನಿಸಲು ಯೋಜಿಸಲಾಗಿತ್ತು. ಉದ್ದನೆಯ ಕಂಬಿಗಳನ್ನು ಗ್ಯಾಸ್ ಕಟರ್ ಬಳಸಿ ತುಂಡರಿಸಲಾಗಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಪೊಲೀಸರು ವಾಹನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read