ರೈಲಿನಿಂದ ಬಿದ್ದು ಮಹಿಳೆ ಸಾವು

ಚಿತ್ರದುರ್ಗ: ಚಲಿಸುತ್ತಿದ್ದ ರೈಲಿನಿಂದ ಕೆಳ ಬಿದ್ದು ಮಹಿಳೆ ಮೃತಪಟ್ಟ ಘಟನೆ ತಮಿಳುನಾಡಿನ ಧರ್ಮಪುರಿ ಸಮೀಪದ ಟೋನೂರು ಬಳಿ ನಡೆದಿದೆ.

ಹೊಳಲ್ಕೆರೆಯ ಮುಷ್ಟುಗರ ಹಟ್ಟಿಯ ನಿರ್ಮಲಮ್ಮ(50) ಮೃತಪಟ್ಟ ಮಹಿಳೆ. ಪತಿ ಕುಮಾರ್ ಆಚಾರ್ ಕುಟುಂಬ ಸದಸ್ಯರು ಹಾಗೂ ಇತರರೊಂದಿಗೆ ಪ್ರವಾಸಕ್ಕೆ ತೆರಳಿದ ವೇಳೆ ಘಟನೆ ನಡೆದಿದೆ. ತಮಿಳುನಾಡಿನ ವಿವಿಧ ಸ್ಥಳಗಳಿಗೆ ಪ್ರವಾಸ ಚೀಟಿ ಮಾಡಿದ್ದ 50 ಜನ ಪ್ರವಾಸಕ್ಕೆ ತೆರಳಿದ್ದು, ಪ್ರವಾಸ ಮುಗಿಸಿ ಮಧುರೈನಿಂದ ವಾಪಸ್ ಬರುವಾಗ ಘಟನೆ ನಡೆದಿದೆ.

ಪತಿ ಕುಮಾರ್ ಆಚಾರ್ ಪಕ್ಕದಲ್ಲಿದ್ದ ನಿರ್ಮಲಮ್ಮ ರೈಲಿನಲ್ಲಿ ಮೂತ್ರ ವಿಸರ್ಜನೆಗೆ ಹೋದಾಗ ಆಯತಪ್ಪಿ ಹೊರಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ರೈಲಿನಲ್ಲಿ ಪತ್ನಿ ಕಾಣದಿದ್ದಾಗ ಕುಮಾರ್ ಹುಡುಕಾಟ ನಡೆಸಿದ್ದಾರೆ. ಚಪ್ಪಲಿ ಹಾಗೂ ಮೊಬೈಲ್ ಕಾಣಿಸಿದ್ದು, ಧರ್ಮಪುರಿ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಹುಡುಕಾಟ ನಡೆಸಿದ ಸಂದರ್ಭದಲ್ಲಿ ರೈಲ್ವೇ ಹಳಿ ಪಕ್ಕದಲ್ಲಿ ನಿರ್ಮಲಮ್ಮ ಅವರ ಶವ ಪತ್ತೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read