BREAKING : ತುಮಕೂರಿನಲ್ಲಿ ಘೋರ ದುರಂತ ; ‘ಮಾರ್ಕೊನಹಳ್ಳಿ ಡ್ಯಾಂ’ಗೆ ತೆರಳಿದ್ದ ಒಂದೇ ಕುಟುಂಬದ 6 ಮಂದಿ ಜಲಸಮಾ‍ಧಿ.!

ತುಮಕೂರು : ಕುಣಿಗಲ್ ನಲ್ಲಿರುವ ಮಾರ್ಕೊನಹಳ್ಳಿ ಡ್ಯಾಂ ನಲ್ಲಿ ಘೋರ ದುರಂತ ಸಂಭವಿಸಿದ್ದು, 6 ಮಂದಿ ನೀರುಪಾಲಾಗಿದ್ದಾರೆ.

15 ಮಂದಿ ಮಾಗಡಿ ಪಾಳ್ಯದಲ್ಲಿರುವ ಅಮೃತೂರು ಠಾಣೆ ಎಎಸ್ ಐ ಜಿಲಾನಿ ಅವರ ಮನೆಗೆ ಬಂದಿದ್ದರು. ಬಳಿಕ ಅವರ ಮನೆಯಿಂದ ಮಾರ್ಕೊನಹಳ್ಳಿ ಡ್ಯಾಂಗೆ ತೆರಳಿದ್ದರು . ನೀರಿಗೆ ಇಳಿದು 12 ಜನ ಆಟ ಆಡುತ್ತಿದ್ದರು. 12 ಮಂದಿ ಪೈಕಿ 6 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಮೃತರನ್ನು ತಬಸಮ್ (42) ಮಿಶ್ರಾ (4) ಶಬಾನಾ (44) ಶಾಜಿಯಾ (25) ಅರ್ಬಿನ್ (30) ಮಹಿಬ್ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಶವ ಪತ್ತೆಯಾಗಿದ್ದು, ಉಳಿದವರಿಗೆ ಶೋಧ ಕಾರ್ಯ ಮುಂದುವರೆಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read