BREAKING: ಶಿವಮೊಗ್ಗದಲ್ಲಿ ವ್ಯಾಪಾರಿಗೆ ಚಾಕು ಇರಿತ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಚೋರಿ ವ್ಯಾಪಾರಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಲಾಗಿದೆ. ಶಿವಮೊಗ್ಗ ನಗರದ ಮುರುಡೇಶ್ವರ ದೇವಾಲಯದ ಬಳಿ ಘಟನೆ ನಡೆದಿದೆ.

ಕಸ್ತೂರ ಬಾ ರಸ್ತೆ ಮುರುಡೇಶ್ವರ ದೇವಸ್ಥಾನದ ಬಳಿ ಕಚೋರಿ ಮಾರುತ್ತಿದ್ದ ವ್ಯಕ್ತಿಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕಚೋರಿ ಮಾರಾಟ ಮಾಡುವ ಹೀರಾಲಾಲ್ ಎಂಬುವರಿಗೆ ವಿಳಾಸ ಕೇಳಿದ್ದು, ನಂತರ ವಾಪಸ್ ಬಂದು ಚಾಕು ಇರಿದು ಪರಾರಿಯಾಗಿದ್ದಾರೆ.

ವಿಳಾಸ ಹೇಳಿದ ಕಚೋರಿ ಮಾರಾಟಗಾರ ಹೀರಾಲಾಲ್ ತಪ್ಪು ವಿಳಾಸ ತಿಳಿಸಿದ್ದಾನೆ. ಆತ ಹೇಳಿದ ವಿಳಾಸದಲ್ಲಿ ಬಾಗಿಲು ಹಾಕಿದೆ ಎಂದು ಕೃತ್ಯವೆಸಗಿದ್ದಾರೆ. ಬೈಕ್ ನಲ್ಲಿ ಬಂದವರು ಕೋಟೆ ಗಂಗೂರಿನ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read