BIGG NEWS : ಇಂದು ಹಿರಿಯ ನಟಿ ಲೀಲಾವತಿಯವರ 11 ನೇ ದಿನದ ಕಾರ್ಯ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನರಾಗಿ 10 ದಿನ ಕಳೆದಿದ್ದು, ಇಂದು 11 ನೇ ದಿನದ ಕಾರ್ಯ ನಡೆಯಲಿದೆ.

ನೆಲಮಂಗಲದ ಸೋಲೋದೇವನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಲೀಲಾವತಿ ಅವರ 11 ನೇ ದಿನದ ಕಾರ್ಯ ನಡೆಯಲಿದೆ.

ಇಂದು ಬೆಳಗ್ಗೆ 9 ಗಂಟೆಗೆ ಲೀಲಾವತಿ ಸಮಾಧಿಗೆ  ಪುತ್ರ ವಿನೋದ್ ರಾಜ್ ಕುಮಾರ್ ಇಷ್ಟದ ಸಿಹಿತಿಂಡಿ, ತಿನಿಸು ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಲೀಲಾವತಿ ಕುಟುಂಬದವರು ಹಾಗೂ ಹಲವು ನಟ, ನಟಿಯರು ಭಾಗಿಯಾಗಲಿದ್ದಾರೆ. ಹಾಗೂ 1 ಸಾವಿರ ಜನಕ್ಕೆ ಅನ್ನದಾನ, ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನಟ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದರು.  ಅವರ ಅಂತ್ಯಕ್ರಿಯೆ ನೆಲಮಂಗಲದ ಸೋಲೋಹಳ್ಳಿಯ ತೋಟದ ಮನೆಯಲ್ಲಿ ನೆರವೇರಿತ್ತು. ಲೀಲಾವತಿ ಮಗ ವಿನೋದ್ ರಾಜ್ ಅಂತಿಮ ವಿಧಿ ವಿಧಾನ ನೆರವೇರಿಸಿದ್ದು, ಹಿಂದೂ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಲೀಲಾವತಿ ಅಂತ್ಯ ಸಂಸ್ಕಾರ ನೆರವೇರಿತ್ತು.

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read