BIG NEWS: ಗೋಮಾಂಸ ಸಾಗಣೆ: ಮೂವರು ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಎಣ್ಣೆನೋಡ್ಲು ಗ್ರಾಮದಿಂದ ಗೋವುಗಳನ್ನು ಅಕ್ರಮವಾಗಿ ಸಾಗಿಸಿ ಕಡಿದು ಮಾಂಸ ಮಾರಾಟಕ್ಕೆ ಕೊಂಡೊಯ್ಯುವಾಗ ಮುಗುಡ್ತಿ ಗ್ರಾಮದ ಸಮೀಪ ರಿಪ್ಪನ್ ಪೇಟೆ ಠಾಣೆ ಪೋಲೀಸರು ವಾಹನ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಣ್ಣೆನೋಡ್ಲು ಗ್ರಾಮದ ಅಕ್ರಮ್(30), ರಿಪ್ಪನ್ ಪೇಟೆ ನಿವಾಸಿ ಭಾಷಾ(30) ಮದೀನ ಕಾಲೋನಿಯ ಸಾಧಿಕ್(40) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 80 ಕೆಜಿ ದನದ ಮಾಂಸ, ಒಂದು ಆಟೋ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read