ಥೈರಾಯ್ಡ್‌ ರೋಗಿಗಳಿಗೆ ಹಾನಿಕಾರಕ ಈ ಆರೋಗ್ಯಕರ ಆಹಾರಗಳು…!

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಬಹಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಥೈರಾಯ್ಡ್ ಕುತ್ತಿಗೆಯಲ್ಲಿ ಇರುವ ಸಣ್ಣ ಗ್ರಂಥಿ, ಇದು ದೇಹಕ್ಕೆ ಅಗತ್ಯವಾದ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ ಅಥವಾ ಹೆಚ್ಚು ಹಾರ್ಮೋನುಗಳನ್ನು ಉತ್ಪಾದಿಸಲು ಪ್ರಾರಂಭಿಸಿದಾಗ, ಈ ಅಪಸಾಮಾನ್ಯ ಕ್ರಿಯೆಯನ್ನು ಥೈರಾಯ್ಡ್ ಕಾಯಿಲೆ ಎಂದು ಕರೆಯಲಾಗುತ್ತದೆ. ಔಷಧಿಗಳ ಮೂಲಕ ಇದನ್ನು ನಿಯಂತ್ರಿಸಬಹುದಾದರೂ, ಜೀವನಶೈಲಿ ಮತ್ತು ಆಹಾರ ಪದ್ಧತಿ ಇದಕ್ಕೆ ಉತ್ತಮ ಪರಿಹಾರ.

ಕೆಲವೊಂದು ಆರೋಗ್ಯಕರ ಆಹಾರ ಪದಾರ್ಥಗಳು ಥೈರಾಯ್ಡ್‌ ಸಮಸ್ಯೆ ಇರುವವರಿಗೆ ಅಪಾಯಕಾರಿಯಾಗಬಹುದು. ಹಾಗಾಗಿ ಥೈರಾಯ್ಡ್ ರೋಗಿಗಳು ಅವುಗಳನ್ನು ಎಚ್ಚರಿಕೆಯಿಂದ ತಿನ್ನಬೇಕು. ಥೈರಾಯ್ಡ್ ಹಾರ್ಮೋನ್‌ಗಳ ಉತ್ಪಾದನೆಯನ್ನು ತಡೆಹಿಡಿಯುವ ಪದಾರ್ಥಗಳನ್ನು ಗೋಯಿಟ್ರೋಜೆನ್‌ಗಳು ಎಂದು ತಜ್ಞರು ಕರೆಯುತ್ತಾರೆ. ಇದು ಪಿಟ್ಯುಟರಿ, ಥೈರಾಯ್ಡ್-ಉತ್ತೇಜಿಸುವ ಹಾರ್ಮೋನ್ ಅನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ. ಥೈರಾಯ್ಡ್ ಅಂಗಾಂಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಗಾಯಿಟರ್‌ಗೆ  ಕಾರಣವಾಗುತ್ತದೆ.

ಕಡಲೆಕಾಯಿ

ಥೈರಾಯ್ಡ್‌ ತೊಂದರೆ ಇರುವವರು ಪೀನಟ್‌ ಬಟರ್‌ ಸೇವಿಸದೇ ಇರುವುದು ಉತ್ತಮ. ಇದರಲ್ಲಿ ಗೋಯಿಟ್ರೋಜೆನ್ಗಳ ಉಪಸ್ಥಿತಿಯಿದ್ದು,  ಹೈಪೋಥೈರಾಯ್ಡಿಸಮ್‌ ಸ್ಥಿತಿಯನ್ನು ಇದು ಇನ್ನಷ್ಟು ಹದಗೆಡಿಸುತ್ತದೆ.

ರಾಗಿ

ಕಬ್ಬಿಣ, ಕ್ಯಾಲ್ಸಿಯಂ ಮತ್ತು ನಾರಿನಂಶ ಹೇರಳವಾಗಿರುವ ಕಾರಣ ರಾಗಿ ಅತ್ಯುತ್ತಮ ಆಹಾರ. ಆದರೆ ಗಾಯಿಟ್ರೊಜೆನಿಕ್ ಆಹಾರವಾಗಿರುವುದರಿಂದ ಥೈರಾಯ್ಡ್ ರೋಗಿಗಳು ಇದನ್ನು ಸಾಂದರ್ಭಿಕವಾಗಿ ಮಾತ್ರ ಸೇವಿಸಬೇಕು. ತಿಂಗಳಲ್ಲಿ 2-3 ಬಾರಿ ಮಾತ್ರ ಸೇವಿಸಬಹುದು. ಆದರೆ ಚೆನ್ನಾಗಿ ನೆನೆಸಿ ಮತ್ತು ಬೇಯಿಸಿದ ನಂತರ ತಿನ್ನಬೇಕು.

ಬಾದಾಮಿ

ಬಾದಾಮಿಯಲ್ಲಿ ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇವೆರಡೂ ಥೈರಾಯ್ಡ್ ಕಾರ್ಯಕ್ಕೆ ಉತ್ತಮವಾಗಿವೆ. ಆದರೆ ಇದು ಗೊಯಿಟ್ರೋಜೆನಿಕ್ ಆಗಿರುವುದರಿಂದ ಇದನ್ನು ಅತಿಯಾಗಿ ಸೇವಿಸಿದರೆ ಥೈರಾಯ್ಡ್ ಗ್ರಂಥಿಯನ್ನು ಹೆಚ್ಚಿಸಬಹುದು. ಇದು ಅಯೋಡಿನ್ ಹೀರಿಕೊಳ್ಳುವ ಥೈರಾಯ್ಡ್ ಗ್ರಂಥಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೈಪೋಥೈರಾಯ್ಡಿಸಮ್ ಹೊಂದಿರುವ ಜನರು ಪ್ರತಿದಿನ 3-5 ನೆನೆಸಿದ ಬಾದಾಮಿಗಳನ್ನು ಮಾತ್ರ ತಿನ್ನಬಹುದು.

ಸೋಯಾಬೀನ್

ಸೋಯಾ ಹೊಂದಿರುವ ಆಹಾರಗಳು ಥೈರಾಯ್ಡ್ ಪೂರಕಗಳನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಬದಲಾಯಿಸಬಹುದು ಮತ್ತು ಅವುಗಳ ಮೇಲೆ ಪರಿಣಾಮ ಬೀರಬಹುದು. ಸೋಯಾ ಥೈರಾಯ್ಡ್ ಗ್ರಂಥಿಯಲ್ಲಿ ಕಿರಿಕಿರಿಯನ್ನು ಉಂಟುಮಾಡುವ ಗೋಯಿಟ್ರೋಜೆನ್ಗಳನ್ನು ಹೊಂದಿರುತ್ತದೆ. ಆದ್ದರಿಂದ ಥೈರಾಯ್ಡ್‌ ರೋಗಿಗಳು ಸೋಯಾ ಉತ್ಪನ್ನಗಳನ್ನು ತಪ್ಪಿಸಬೇಕು.

ಗೋಧಿ

ಆಟೋಇಮ್ಯೂನ್ ಹೈಪೋಥೈರಾಯ್ಡಿಸಮ್‌ ಇದ್ದಾಗ ಗೋಧಿ ಸೇವನೆಯನ್ನು ಕಡಿಮೆ ಮಾಡಲು ಸೂಚಿಸಲಾಗುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಗೋಧಿಯನ್ನು ಸೇವನೆ ಮಾಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read