ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಳಿಯೇ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಸಿಎಂ ಸಿದ್ದರಾಮಯ್ಯ ಮನೆಯಿಂದ ಕೂಗಳತೆ ದೂರದಲ್ಲಿ ಕುಮಾರಕೃಪಾ ವೆಸ್ಟ್ ನಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು, ಕಾಂಪೌಂಡ್ ಜಿಗಿದು ಬಂದು ಸಂಪ್ ಮುಚ್ಚಳವನ್ನು ಕದ್ದು ಮರೆಯಲ್ಲಿಟ್ಟಿದ್ದಾನೆ. ಬಳಿಕ ಜನರ ಓಡಾಟ ಕಡಿಮೆಯಾದ ಬಳಿಕ ಮತ್ತೆ ಬಂದು ಅದನ್ನು ಕದ್ದೊಯ್ದಿದ್ದಾನೆ.
ಹಾಡಹಗಲೇ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.