ಧಾರವಾಡ- ಬೆಂಗಳೂರು ಹೊಸ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಕಿಡಿಗೇಡಿ : ಗಾಜು ಪುಡಿ

ದಾವಣಗೆರೆ : ಹೊಸ ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದ ಘಟನೆ ದಾವಣಗೆರೆ ನಗರದ ಹೊರ ವಲಯದ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ನಡೆದಿದೆ.

ಧಾರವಾಡದಿಂದ ಮಧ್ಯಾಹ್ನ ರೈಲು ವಾಪಸ್ ಬೆಂಗಳೂರಿಗೆ ತೆರಳುವಾಗ ದಾವಣಗೆರೆ ಬಳಿ ಕಿಡಿಗೇಡಿಯೊಬ್ಬ ಕಲ್ಲು ತೋರಿ ಪರಾರಿಯಾಗಿದ್ದಾನೆ. ಕಲ್ಲು ತಾಗಿದ ರಭಸಕ್ಕೆ ಗಾಜಿಗೆ ಹಾನಿಯಾಗಿದೆ. ಈ ಕುರಿತು ರೈಲ್ವೆ ಆರ್ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕು ದಿನದ ಹಿಂದೆ ಆರಂಭವಾದ ಹೊಸ ಹೈಸ್ಪೀಡ್ ರೈಲು ವಂದೇಭಾರತ್ ರೈಲಿಗೆ ಕಲ್ಲು ಹೊಡೆಯಲಾಗಿದೆ. ಇತ್ತೀಚೆಗೆ ರೈಲಿಗೆ ಕಲ್ಲು ಹೊಡೆಯುವ ಪ್ರಕರಣಗಳು ಸಾಕಷ್ಟು ವರದಿಯಾಗಿರುವುದು ಆತಂಕ ಮೂಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read