ಬೆಂಗಳೂರು : ಸರ್ಕಾರ ಹಿಂದೂಗಳ ಅವಮಾನಿಸುವುದನ್ನೇ ಕಾಯಕ ಮಾಡಿಕೊಂಡಿದೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
ಸರ್ಕಾರ ಹಿಂದೂಗಳ ಅವಮಾನಿಸುವುದನ್ನೇ ಕಾಯಕ ಮಾಡಿಕೊಂಡಿದೆ. ಹೀಗಾಗಿ, ಅನ್ಯಧರ್ಮೀಯರಿಂದ ದಸರಾ ಉದ್ಘಾಟಿಸುತ್ತಿದೆ ಗಣೇಶ ಉತ್ಸವ ಆಚರಿಸುವುದಕ್ಕೆ ಸರ್ಕಾರ ನಿಯಂತ್ರಣ ಹೇರುತ್ತದೆ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಮುಖ ಮಂದಿರಗಳ ಸೇವಾ ಶುಲ್ಕ ಏರಿಸಿ ದ್ರೋಹ ಬಗೆಯುತ್ತಿದೆ ಜಾತಿಗಣತಿ ಹೆಸರಲ್ಲಿ ಹಿಂದೂ ಧರ್ಮ ಒಡೆಯುತ್ತಿದೆ ಹಿಂದೂಗಳ ಭೂಮಿ ವಕ್ಫ್ ಬೋರ್ಡ್ ಕಸಿಯುತ್ತಿದೆ ಜಾತಿಗಣತಿ ನೆಪದಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನಿಸುತ್ತಿದೆ. ಎಕ್ಸಾಂ ಹಾಲ್ನಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ ತೆಗೆಸಿ ಅವಮಾನಿಸುತ್ತಿದೆ ಸಿಎಂ ಸಿದ್ದರಾಮಯ್ಯನವರೇ, ಹಿಂದೂಗಳೆಂದರೆ ತಮಗೆ ಯಾಕಿಷ್ಟು ದ್ವೇಷ, ತಾತ್ಸಾರ ? ಎಂದು ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 31,503 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವುದು ನೋಡಿದರೆ ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರ ರಕ್ಷಣೆ ಹೇಗಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ. ಮಹಿಳೆಯರ ಸುರಕ್ಷತೆ ಕಡೆಗಣಿಸುತ್ತಿರುವುದರಿಂದ ದಿನದಿಂದ ದಿನಕ್ಕೆ ಅಪರಾಧಗಳು ಹೆಚ್ಚುತ್ತಿದ್ದರೂ ಕೂಡ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡುವುದರಲ್ಲಿ ವಿಫಲವಾಗಿದೆ. ಇದು ಕಾಂಗ್ರೆಸ್ ಆಡಳಿತದ ನಿಜವಾದ ಮುಖ ಎಂದು ಕಿಡಿಕಾರಿದೆ.
@INCKarnataka ಸರ್ಕಾರ ಹಿಂದೂಗಳ ಅವಮಾನಿಸುವುದನ್ನೇ ಕಾಯಕ ಮಾಡಿಕೊಂಡಿದೆ. ಹೀಗಾಗಿ,
— BJP Karnataka (@BJP4Karnataka) September 20, 2025
➡️ಅನ್ಯಧರ್ಮೀಯರಿಂದ
ದಸರಾ ಉದ್ಘಾಟಿಸುತ್ತಿದೆ
➡️ಗಣೇಶ ಉತ್ಸವ ಆಚರಿಸುವುದಕ್ಕೆ
ಸರ್ಕಾರ ನಿಯಂತ್ರಣ ಹೇರುತ್ತದೆ
➡️ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ
ಪ್ರಮುಖ ಮಂದಿರಗಳ ಸೇವಾ ಶುಲ್ಕ
ಏರಿಸಿ ದ್ರೋಹ ಬಗೆಯುತ್ತಿದೆ
➡️ಜಾತಿಗಣತಿ ಹೆಸರಲ್ಲಿ
ಹಿಂದೂ…