ಭಯಾನಕ ಸಾವು: ಯಜಮಾನನನ್ನೇ ಬಲಿ ತೆಗೆದುಕೊಂಡ ಒಂಟೆ

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಒಂದು ಭಯಾನಕ ಘಟನೆಯಲ್ಲಿ, ಸಾಲ ಮಾಡಿ ತಂದಿದ್ದ ಒಂಟೆಯೊಂದು ತನ್ನ ಯಜಮಾನನನ್ನೇ ಕಚ್ಚಿ ಕೊಂದಿದೆ. ಈ ಘಟನೆ ಅಜೀತ್‌ಸರ್ ಗ್ರಾಮದಲ್ಲಿ ನಡೆದಿದ್ದು, ರಾಮ್‌ಲಾಲ್ ಎಂಬ ರೈತ ತನ್ನ ಕುಟುಂಬ ನಿರ್ವಹಣೆಗಾಗಿ ಈ ಒಂಟೆಯನ್ನು ಖರೀದಿಸಿದ್ದನು.

ರಾಮ್‌ಲಾಲ್, ಒಂಟೆಯನ್ನು ಕಟ್ಟಿ ಹಾಕುವಾಗ, ಒಂಟೆ ಇದ್ದಕ್ಕಿದ್ದಂತೆ ಕೋಪಗೊಂಡು ಆತನ ತಲೆಯನ್ನು ತನ್ನ ದವಡೆಯಲ್ಲಿ ಸಿಕ್ಕಿಸಿಕೊಂಡು, ಭೀಕರವಾಗಿ ದಾಳಿ ಮಾಡಿದೆ. ರಾಮ್‌ಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದೃಶ್ಯವನ್ನು ನೋಡಿದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ. ಕೆಲವು ತಿಂಗಳ ಹಿಂದೆ ಬಿಕಾನೇರ್‌ನಲ್ಲೂ ಒಂಟೆಯೊಂದು ತನ್ನ ಯಜಮಾನನನ್ನು ಕೊಂದಿತ್ತು. ಒಂಟೆಗಳು ಬಹಳ ಸೂಕ್ಷ್ಮ ಪ್ರಾಣಿಗಳಾಗಿದ್ದು, ಅವು ಕೋಪಗೊಂಡರೆ ಅವುಗಳನ್ನು ನಿಯಂತ್ರಿಸುವುದು ಕಷ್ಟ ಎಂದು ಸ್ಥಳೀಯರು ಹೇಳುತ್ತಾರೆ.

ಸದ್ಯಕ್ಕೆ ಒಂಟೆಯನ್ನು ಮರಕ್ಕೆ ಕಟ್ಟಲಾಗಿದೆ. ಆದರೆ, ಕುಟುಂಬಸ್ಥರು ಅದನ್ನು ಕೊಲ್ಲಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ರಾಮ್‌ಲಾಲ್ ಅವರಿಗೆ ಮೂವರು ಮಕ್ಕಳಿದ್ದು, ಈ ಘಟನೆ ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read