ಶಬರಿಮಲೆ ಯಾತ್ರಾರ್ಥಿಗಳಿಗೆ 10 ಲಕ್ಷ ಬಿಸ್ಕೆಟ್ ಪ್ಯಾಕೆಟ್ ವಿತರಣೆಗೆ ಮುಂದಾದ ತಮಿಳುನಾಡು ಸರ್ಕಾರ

ಚೆನ್ನೈ: ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ವಿತರಿಸಲು ತಮಿಳುನಾಡು ಸರ್ಕಾರ 10 ಲಕ್ಷ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ತಲುಪಿಸಲಿದೆ ಎಂದು ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿಯ ತಿರುವಾಂಕೂರು ದೇವಸ್ವಂ ಮಂಡಳಿ ಶನಿವಾರ ತಿಳಿಸಿದೆ.

ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು 10 ಲಕ್ಷ ಬಿಸ್ಕತ್ ಪ್ಯಾಕೆಟ್‌ಗಳನ್ನು ನಾಲ್ಕು ಕಂಟೈನರ್‌ಗಳಲ್ಲಿ ಪಂಬಾದಲ್ಲಿ ತಲುಪಿಸಲಿದೆ. ಮೊದಲ ಕಂಟೇನರ್ ಗೆ ಶನಿವಾರ ಚೆನ್ನೈನಿಂದ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ. ಸೇಕರ್ ಬಾಬು ಅವರು ಹಸಿರು ನಿಶಾನೆ ತೋರಿದ್ದಾರೆ.

ಪಂಬಾದಿಂದ ಸನ್ನಿಧಾನಂ ವರೆಗೆ ವಿವಿಧೆಡೆ ಬಿಸ್ಕತ್‌ಗಳನ್ನು ವಿತರಿಸಲಾಗುವುದು. ಟಿಡಿಬಿಯು ಯಾತ್ರಾರ್ಥಿಗಳಿಗೆ ಬಿಸ್ಕೆಟ್ ಜೊತೆಗೆ ಔಷಧೀಯ ನೀರಿನ ವ್ಯವಸ್ಥೆ ಮಾಡಿದೆ.

ಈ ಹಿಂದೆ ಯಾತ್ರಾರ್ಥಿಗಳಿಗೆ ಬಿಸ್ಕೆಟ್‌ಗಳನ್ನು ಪ್ರಾಯೋಜಿಸಿದ್ದ ಶಬರಿ ಗ್ರೂಪ್ ಮತ್ತು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಕೇರಳ ಸಂಪರ್ಕಾಧಿಕಾರಿ ಉನ್ನಿಕೃಷ್ಣನ್ ಬಿಸ್ಕತ್ ಪ್ಯಾಕೇಟ್ ಗಳ ವಿತರಣೆಯನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read