BREAKING: ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಗೆ ಬಿಗ್ ಶಾಕ್: ಪಾಕ್ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಭಾರೀ ದಂಡ

ದುಬೈ: ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಸೂರ್ಯಕುಮಾರ್ ಯಾದವ್ ಅವರಿಗೆ 30% ದಂಡ ವಿಧಿಸಲಾಗಿದೆ.

ಹೌದು, ಸೆಪ್ಟೆಂಬರ್ 14 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮಾಡಿದ ಹೇಳಿಕೆಗಾಗಿ ಅವರ ಪಂದ್ಯ ಶುಲ್ಕದ 30% ಅನ್ನು ನೀಡಲಾಗಿದೆ. ಗೆಲುವಿನ ನಂತರ ಸೂರ್ಯಕುಮಾರ್ ಅವರು ಪಾಕ್ ವಿರುದ್ಧದ ಗೆಲುವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ, ಆಪರೇಷನ್ ಸಿಂಧೂರ್‌ ಯಶಸ್ಸಿಗಾಗಿ ಭಾರತೀಯ ಸೇನೆಗೆ ಅರ್ಪಿಸುತ್ತೇವೆ ಎಂದು ಹೇಳಿದ್ದರು.

ಘಟನೆಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೂರ್ಯಕುಮಾರ್ ಅವರ ರಾಜಕೀಯ ಹೇಳಿಕೆಗಳಿಗಾಗಿ ಅಧಿಕೃತ ದೂರು ದಾಖಲಿಸಿತು. ಐಸಿಸಿ ಇತ್ತೀಚೆಗೆ ಅದನ್ನು ಪರಿಶೀಲಿಸಿತು ಮತ್ತು ಸೂರ್ಯಕುಮಾರ್ ಅವರೊಂದಿಗೆ ಅದರ ಬಗ್ಗೆ ಮಾತನಾಡಿ ನಂತರ ದಂಡ ವಿಧಿಸಲಾಯಿತು. 35 ವರ್ಷದ ಆಟಗಾರ ಆರಂಭದಲ್ಲಿ ತಪ್ಪಿತಸ್ಥನಲ್ಲ ಎಂದು ಒಪ್ಪಿಕೊಂಡರು. ಆದರೆ ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಮನವರಿಕೆಯಾಗಲಿಲ್ಲ. ದಂಡ ವಿಧಿಸಿದ್ದಾರೆ. ಆದಾಗ್ಯೂ, ಭಾರತವು ಶೀಘ್ರದಲ್ಲೇ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸಿದೆ.

ಪಾಕ್ ಆಟಗಾರರಿಗೆ ದಂಡ

ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2025 ಪಂದ್ಯದ ಸಂದರ್ಭದಲ್ಲಿ ಹ್ಯಾರಿಸ್ ರೌಫ್ ಅವರ ವಿವಾದಾತ್ಮಕ ವರ್ತನೆಗಾಗಿ ಶೇ. 30 ರಷ್ಟು ದಂಡ ವಿಧಿಸಲಾಗಿದೆ.

ಏತನ್ಮಧ್ಯೆ, ಸೆಪ್ಟೆಂಬರ್ 21 ರಂದು ದುಬೈನಲ್ಲಿ ನಡೆದ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ಗನ್ ಗುಂಡೇಟಿನ ರೀತಿ ಸಂಭ್ರಮಿಸಿದ್ದಕ್ಕಾಗಿ ಆರಂಭಿಕ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್‌ಗೆ ಎಚ್ಚರಿಕೆ ನೀಡಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read