BREAKING: ಮಾರಾಟ ಮಾಡಿದ್ದ ಪಾರಿವಾಳ ಹಾರಿ ಹೋಗಿದ್ದಕ್ಕೆ ಚಾಕು ಇರಿತ

ಬೆಳಗಾವಿ: ಮಾರಾಟ ಮಾಡಿದ್ದ ಪಾರಿವಾಳ ಹಾರಿ ಹೋಗಿದ್ದಕ್ಕೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿಯ ಬಸವನ ಕುಡಚಿ ಗ್ರಾಮದಲ್ಲಿ ನಡೆದಿದೆ.

ಆದಿತ್ಯ ಪಾಟೀಲ್ ಎಂಬಾತನಿಗೆ ದರ್ಶನ್ ಎಂಬಾತ 1500 ರೂಪಾಯಿಗೆ ಎರಡು ಪಾರಿವಾಳ ಮಾರಾಟ ಮಾಡಿದ್ದ. ಇದೇ ವಿಚಾರಕ್ಕೆ ದರ್ಶನ್ ಮನೆಗೆ ಹೋಗಿ ಆದಿತ್ಯ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ. ನಂತರ ದರ್ಶನ್ ಸಹ ಗುಂಪು ಕಟ್ಟಿಕೊಂಡು ಬಂದು ಆದಿತ್ಯನ ಮೇಲೆ ಹಲ್ಲೆ ಮಾಡಿದ್ದಾನೆ. ಗಲಾಟೆಯಲ್ಲಿ ಓರ್ವನಿಗೆ ಚಾಕು ಇರಿತವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡೂ ಕಡೆ ಗಲಾಟೆಯಾಗಿ ಹಲ್ಲೆ ನಡೆದ ಹಿನ್ನೆಲೆ ಪ್ರತ್ಯೇಕ ದೂರು ದಾಖಲಾಗಿದೆ. ಬಾಗೇವಾಡಿ, ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗಿದೆ. ಬಾಗೇವಾಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಳಮಾರುತಿ ಠಾಣೆ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read