ತಮ್ಮನಿಗಾಗಿ 63 ದಿನ ಜೈಲಲ್ಲಿದ್ದರೂ ನನ್ನ ವಿರುದ್ಧ ಪತ್ನಿ ಕಣಕ್ಕೆ: ಜನಾರ್ದನ ರೆಡ್ಡಿ ವಿರುದ್ಧ ಸೋಮಶೇಖರ ರೆಡ್ಡಿ ಅಸಮಾಧಾನ

ಬಳ್ಳಾರಿ: ತಮ್ಮನಿಗಾಗಿ 63 ದಿನ ಜೈಲು ವಾಸ ಅನುಭವಿಸಿದ್ದೆ. ಅವನನ್ನು ಜೈಲಿನಿಂದ ಬಿಡಿಸಲು ಹಗಲು ರಾತ್ರಿ ಹೋರಾಟ ನಡೆಸಿದೆ. ಇಷ್ಟೆಲ್ಲ ತ್ಯಾಗ ಮಾಡಿದರೂ ನನ್ನ ವಿರುದ್ಧವೇ ಪತ್ನಿಯನ್ನು ಕಣಕ್ಕಿಳಿಸಿದ್ದಾನೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಸಹೋದರ ಜನಾರ್ದನ ರೆಡ್ಡಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪದಡಿ ಆತ ಜೈಲಿಗೆ ಹೋದ ಕಾರಣ ಅವರಿಗಾಗಿ ಎಷ್ಟೆಲ್ಲ ತ್ಯಾಗ ಮಾಡಿದ್ದೇನೆ. 2013ರಲ್ಲಿ ಚುನಾವಣೆಗೂ ನಾನು ಸ್ಪರ್ಧಿಸಿರಲಿಲ್ಲ. ಆತನಿಗಾಗಿ ನಾನು ಕೂಡ ಜೈಲು ಸೇರಬೇಕಾಯಿತು ಎಂದರು.

ನಾನು ಆತ ಸ್ಥಾಪಿಸಿದ ಪಕ್ಷಕ್ಕೆ ಸೇರಲಿಲ್ಲ ಎಂದು ನನ್ನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಲಿದೆ ಎನ್ನುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ನೀಡದಿದ್ದರೂ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read