ಮಗಳನ್ನು ಪ್ರೀತಿಸಿದ ಯುವಕನಿಗೆ ಬಿಸಿನೀರು ಎರಚಿ ವಿಕೃತಿ ಮೆರೆದ ಪಾಪಿ..!

ಮಡಿಕೇರಿ : ಪ್ರೀತಿಸಿದ ಯುವಕನಿಗೆ ಯುವತಿಯ ತಂದೆ ಬಿಸಿನೀರು ಎರಚಿ ವಿಕೃತಿ ಮೆರೆದ ಘಟನೆ ಮಡಿಕೇರಿಯ ಮದೆನಾಡು ಗ್ರಾಮದಲ್ಲಿ ನಡೆದಿದೆ.

ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಗಣಪತಿ ಬೀದಿ‌ ನಿವಾಸಿ ಸುಹೇಲ್ ಮದೆನಾಡಿನ ಜೀನತ್ ಎಂಬಾಕೆಯನ್ನ ಪ್ರೀತಿಸುತ್ತಿದ್ದ.  ಸುಹೈಲ್  ಪ್ರೀತಿಯ ವಿಚಾರ ಮಾತನಾಡಲು ಯುವತಿಯ ಮನೆಗೆ ಹೋಗಿರುತ್ತಾನೆ. ಈ ವೇಳೆ ಯುವತಿಯ ತಂದೆ ಸಾದಿಕ್ ಜಗಳ ತೆಗೆದಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿದೆ. ಪರಿಣಾಮ ಸುಹೈಲ್ ಮೇಲೆ ಸಾದಿಲ್ ಬಿಸಿನೀರು ಎರಚಿ ವಿಕೃತಿ ಮೆರೆದಿದ್ದಾನೆ. ಪರಿಣಾಮ ಸುಹೈಲ್ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯಲ್ಲಿ ಹಿಂಸೆಯಾಗುತ್ತಿದೆ ಮನೆಗೆ ಬಂದು ಮಾತನಾಡು, ನನ್ನನ್ನು ಕರೆದುಕೊಂಡು ಹೋಗು ಎಂದು ಯುವತಿ ಸುಹೈಲ್ ಗೆ ಕರೆ ಮಾಡಿದ್ದಳು. ಅಂತೆಯೇ ಯುವತಿಯ ಮನೆಗೆ ಬಂದ ಸುಹೈಲ್ ಮೇಲೆ ಯುವತಿಯ ತಂದೆ ಸಾದಿಕ್ ಬಿಸಿನೀರು ಎರಚಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read