ಉಡುಪಿ: ಹಣ ಕೊಡದಿದ್ದಕ್ಕೆ ಕತ್ತು ತಾಯಿಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಮಣಿಪಾಲ್ ಸಮೀಪ ನಡೆದಿದೆ. ಆರೋಪಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಪದ್ಮಾಬಾಯಿ(45) ಕೊಲೆಯಾದ ಮಹಿಳೆ. ಪುತ್ರ ಈಶ ನಾಯಕ(26) ಕೊಲೆ ಆರೋಪಿಯಾಗಿದ್ದಾನೆ. ಮಣಿಪಾಲದ ಪದ್ಮಬಾಯಿ ಸೊಂಟ ನೋವಿನ ಚಿಕಿತ್ಸೆಗಾಗಿ ಜೂನ್ 18ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಂದು ರಾತ್ರಿ ಈಶ ತಮ್ಮ ಚಿಕ್ಕಮ್ಮ ಶಿಲ್ಪಾ ಅವರಿಗೆ ಕರೆ ಮಾಡಿ ತಾಯಿಗೆ ಹುಷಾರಿಲ್ಲ ಎಂದು ಹೇಳಿದ್ದ. ಶಿಲ್ಪಾ ಆನ್ಲೈನ್ ನಲ್ಲಿ ಹಣ ಕಳುಹಿಸಿದ್ದರು.
ಜೂನ್ 19ರಂದು ಶಿಲ್ಪಾ ಅವರಿಗೆ ಕರೆ ಮಾಡಿದ ಈಶ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮೃತಪಟ್ಟಿರುವುದಾಗಿ ತಿಳಿಸಿದ್ದ. ಆಸ್ಪತ್ರೆಗೆ ಬಂದು ನೋಡಿದಾಗ ಅವರ ಕುತ್ತಿಗೆಯ ಬಳಿ ಕೆಂಪಾಗಿದ್ದು, ಸಂಶಯದಿಂದ ಮಣಿಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಕೊಲೆ ಪ್ರಕರಣ ಗೊತ್ತಾಗಿದೆ.