SHOCKING : ಬೆಂಗಳೂರಲ್ಲಿ ಘೋರ ಘಟನೆ ; ದಂಡಪಿಂಡ ಎಂದ ತಮ್ಮನನ್ನೇ ಕೊಂದ ಪಾಪಿ ಅಣ್ಣ..!

ಬೆಂಗಳೂರು : ತಮ್ಮನನ್ನೇ ಅಣ್ಣ ಕೊಲೆ ಮಾಡಿದ ಘೋರ ಘಟನೆ ಗಾರ್ವೇಬಾವಿ ಪಾಳ್ಯದ ಹೊಂಗಸಂದ್ರದ ಲಕ್ಷ್ಮೀ ಪುರದಲ್ಲಿ ನಡೆದಿದೆ.

ಮೃತರನ್ನು ಪ್ರಕಾಶ್( 18 ) ಎಂದು ಗುರುತಿಸಲಾಗಿದೆ.. ರಜನಿ (28) ಎಂಬಾತ ತಮ್ಮ ಪ್ರಕಾಶ್ ನನ್ನು ಕೊಲೆ ಮಾಡಿದ್ದಾನೆ.

ರಜನಿ ಆರೋಗ್ಯ ಸರಿಯಿಲ್ಲದೇ ಮನೆಯಲ್ಲಿಯೇ ಇದ್ದಿದ್ದನ್ನು ನೋಡಿದ ತಮ್ಮ ಪ್ರಕಾಶ್ ಆತನನ್ನು ನೀನು ದಂಡಪಿಂಡ ಎಂದು ಕರೆದಿದ್ದಾನೆ. ಇದರಿಂದ ಸಿಟ್ಟಾದ ರಜನಿ ತಮ್ಮನ ಮೇಲೆ ಚಾಕು ಎಸೆದಿದ್ದಾನೆ. ಅಣ್ಣ ಎಸೆದ ಚಾಕು ಪ್ರಕಾಶ್ ಎದೆಗೆ ಚುಚ್ಚಿಕೊಂಡಿದೆ. ತೀವ್ರ ರಕ್ತಸ್ರಾವವದಿಂದ ಪ್ರಕಾಶ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read