BREAKING: ಶುಲ್ಕ ಕಟ್ಟಿಲ್ಲವೆಂದು ಶಾಲೆಯಲ್ಲೇ ಮಕ್ಕಳನ್ನು ಕೂಡಿ ಹಾಕಿದ ಶಿಕ್ಷಕರು

ಶಾಲೆಗೆ ಶುಲ್ಕ ಕಟ್ಟಿಲ್ಲವೆಂದು ಮಕ್ಕಳನ್ನು ಕೂಡಿ ಹಾಕಿದ ಘಟನೆ ಕೊಪ್ಪಳದ ನಿವೇದಿತಾ ಶಾಲೆಯಲ್ಲಿ ನಡೆದಿದೆ. ಶಾಲಾ ಶುಲ್ಕ ಬಾಕಿ ಉಳಿಸಿಕೊಂಡಿದ್ದ ಮಕ್ಕಳನ್ನು ಮನೆಗೆ ಕಳುಹಿಸದೆ ಶಾಲೆಯ ಸಿಬ್ಬಂದಿ ಉಳಿಸಿಕೊಂಡಿದ್ದಾರೆ.

20ಕ್ಕೂ ಹೆಚ್ಚು ಮಕ್ಕಳನ್ನು ಈ ರೀತಿ ಶಾಲೆಯಲ್ಲಿ ಉಳಿಸಿಕೊಳ್ಳಲಾಗಿದೆ. ನಿವೇದಿತಾ ಶಾಲೆಯ ಮುಖ್ಯಸ್ಥರು ಈ ರೀತಿ ಮಾಡಿದ್ದಾರೆ. ಮಕ್ಕಳು ಮನೆಗೆ ಬಾರದಿದ್ದ ಕಾರಣ ಆತಂಕಗೊಂಡ ಪೋಷಕರು ಶಾಲೆಗೆ ಭೇಟಿ ನೀಡಿದಾಗ ಶುಲ್ಕ ಕಟ್ಟದಿರುವುದಕ್ಕೆ ಶಾಲೆಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.

ಈ ವೇಳೆ ಶಾಲಾ ಮುಖ್ಯಸ್ಥರ ಜೊತೆಗೆ ಪೋಷಕರ ಮಾತಿನ ಚಕಮಕಿ ನಡೆದಿದೆ. ಆನಂತರ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.

(ಸಾಂದರ್ಭಿಕ ಚಿತ್ರ)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read