‘ಐ ಲವ್ ಸೌತ್ ಸಿನಿಮಾ’: ಮೈಸೂರು ಚಾಮುಂಡೇಶ್ವರಿ ದರ್ಶನ ಪಡೆದ ಬಾಲಿವುಡ್ ನಟ ಸಂಜಯ್ ದತ್ ಹೇಳಿಕೆ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ‘ಕೆಡಿ’ ಚಿತ್ರತಂಡ ಭೇಟಿ ನೀಡಿದೆ. ಬಾಲಿವುಡ್ ನಟ ಸಂಜಯ್ ದತ್, ನಿರ್ದೇಶಕ ಪ್ರೇಮ್, ನಟ ಶೋಭರಾಜ್ ಮೊದಲಾದವರು ದೇವಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ.

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಸಂತಸವಾಯಿತು ಎಂದು ನಟ ಸಂಜಯ್ ದತ್ ಹೇಳಿದ್ದಾರೆ. ನನಗೆ ದಕ್ಷಿಣ ಭಾರತದ ಸಿನಿಮಾ ಅಂದರೆ ಬಹಳ ಇಷ್ಟ. ‘ಐ ಲವ್ ಸೌತ್ ಸಿನಿಮಾ’ ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅವರು ಇಂದು ಚಾಮುಂಡೇಶ್ವರಿ ದರ್ಶನ ಪಡೆದು ಮಾತನಾಡಿದರು.

‘ಕೆಜಿಎಫ್ 2’ ಚಿತ್ರದ ನಂತರ ‘ಕೆಡಿ’ ಚಿತ್ರದಲ್ಲಿ ಸಂಜಯ್ ದತ್ ಅಭಿನಯಿಸಿದ್ದಾರೆ. ಪ್ರೇಮ್ ನಿರ್ದೇಶನ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read