BIG NEWS: ಹಳಿ ತಪ್ಪಿದ ಸಬರಮತಿ ಎಕ್ಸ್ ಪ್ರೆಸ್ ರೈಲು: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಕಾನ್ಪುರ: ಸಬರಮತಿ ಎಕ್ಸ್ ಪ್ರೆಸ್ ರೈಲಿನ 22 ಬೋಗಿಗಳು ಹಳಿ ತಪ್ಪಿ ಅವಘಡ ಸಂಭವಿಸಿರುವ ಘಟನೆ ಉತ್ತರಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣ ನಡುವೆ ಸಂಭವಿಸಿದೆ.

ಎಕ್ಸ್ ಪ್ರೆಸ್ ರೈಲು ವಾರಣಸಿಯಿಂದ ಗುಜರಾತ್ ನ ಅಹಮದಾಬಾದ್ ಗೆ ತೆರಳುತ್ತಿತ್ತು. ಇಂದು ನಸುಕಿನ ಜಾವ 2:30ರ ಸುಮಾರಿಗೆ ಕಾನ್ಪುರದ ಗೋವಿಂದಪುರಿ ಹೋಲ್ಡಿಂಗ್ ಬಳಿ ಹಳಿ ತಪ್ಪಿದೆ. ರೈಲಿನ 22 ಬೋಗಿಗಳು ಹಳಿತಪ್ಪಿವೆ.

ರೈಲಿನ ಇಂಜಿನ್ ಗೆ ಬಂಡೆಯೊಂದು ಬಡಿದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. 22 ಬೋಗಿಗಳು ಹಳಿತಪ್ಪಿದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ, ಪ್ರಯಾಣಿಕರಿಗೆ ಗಾಯದಂತಹ ತೊಂದರೆಗಳು ಆಗಿಲ್ಲ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read