ಪಕ್ಷೇತನಾಗಿ ಸ್ಪರ್ಧಿಸಿದ್ರೂ 10 ಸಾವಿರ ಮತಗಳ ಅಂತರದ ಗೆಲುವೆಂದು ಸರ್ವೇ ವರದಿ: ಆದರೂ ಬಿಜೆಪಿಯಲ್ಲೇ ಇರುವುದಾಗಿ ರಾಮದಾಸ್ ಘೋಷಣೆ

ಮೈಸೂರು: ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ 10,000 ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ್ದೇನೆ. ವರದಿ ಕೂಡ ಬಂದಿದೆ. ಸರ್ವೇ ವರದಿ ಪ್ರಕಾರ ನಾನು ಪಕ್ಷೇತರನಾಗಿ ಸ್ಪರ್ಧಿಸಿದರೂ ಜಯಗಳಿಸುತ್ತೇನೆ. ಆದರೆ, ನಾನು ಪಕ್ಷದ ವಿರುದ್ಧ ಹೋಗುವುದಿಲ್ಲ ಎಂದು ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

ನಿಮ್ಮ ಶಾಸಕ ನಿಮ್ಮ ಮನೆಯಲ್ಲಿ ಇರುತ್ತಾನೆ. ನಮ್ಮ ಗೌರವದ ಜೊತೆ ಅಮ್ಮನ ಪಕ್ಷದ ಗೌರವವೂ ದೊಡ್ಡದಾಗಿರುತ್ತದೆ. ಕೆಆರ್ ಕ್ಷೇತ್ರದ ಟಿಕೆಟ್ ಘೋಷಣೆ ನಂತರದ ಬೆಳವಣಿಗೆ ಗಮನಿಸಿದ್ದೇನೆ. ಕ್ಷೇತ್ರದ ಕಾರ್ಯಕರ್ತರ ಪೈಕಿ ಶೇಕಡ 90ರಷ್ಟು ಜನ ನನ್ನ ಜೊತೆಗಿದ್ದಾರೆ. ಇನ್ನು ಮುಂದೆಯೂ ನಾನು ಕೈಗೊಳ್ಳುವ ನಿರ್ಧಾರಕ್ಕೆ ನೀವು ಬದ್ಧರಾಗಿರಬೇಕು ಎಂದು ಹೇಳಿದ ರಾಮದಾಸ್ ಬಿಜೆಪಿಯಲ್ಲಿ ಇರುವುದಾಗಿ ಬೆಂಬಲಿಗರ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read