ಹಾಡಹಗಲೇ ಮನೆ ಬೀಗ ಮುರಿದು 5 ಲಕ್ಷ ರೂ. ನಗದು, 500 ಗ್ರಾಂ ಚಿನ್ನ ಕಳವು

ಯಾದಗಿರಿ: ಹಾಡಹಗಲೇ ಮನೆಯಲ್ಲಿದ್ದ 500 ಗ್ರಾಂ ಚಿನ್ನ, 5 ಲಕ್ಷ ರೂಪಾಯಿ ನಗದು ಕಳವು ಮಾಡಿದ ಘಟನೆ ಯಾದಗಿರಿ ನಗರದ ವಾಲ್ಮೀಕಿ ಭವನದ ಬಳಿ ನಡೆದಿದೆ.

ರಾಘವೇಂದ್ರ ಕಟ್ಟಿಮನಿ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಮನೆಯವರು ಕಲಬುರಗಿಗೆ ತೆರಳಿದ್ದಾಗ ಕಳ್ಳರು ಕೃತ್ಯವೆಸಗಿದ್ದಾರೆ. ಮನೆಯ ಬೀಗ ಒಡೆದು ಎರಡು ಬೆಡ್ರೂಮ್ ಗಳಲ್ಲಿದ್ದ ಚಿನ್ನ ಮತ್ತು ನಗದು ದೋಚಲಾಗಿದೆ.

ಲಾಕರ್ ಸಮೇತ ಚಿನ್ನಾಭರಣ ಹಾಗೂ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಇಬ್ಬರು ಕಳ್ಳರು ಓಡಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read