BREAKING : ಕನ್ನಡದ ಖ್ಯಾತ ಕವಿ, ಸಾಹಿತಿ ‘H.S ವೆಂಕಟೇಶ ಮೂರ್ತಿ’ ಇ‍ನ್ನಿಲ್ಲ |Venkatesh Murthy passed Away

ಬೆಂಗಳೂರು : ಕನ್ನಡದ ಖ್ಯಾತ ಕವಿ, ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ನಿಧನರಾಗಿದ್ದಾರೆ.

ಎಚ್.ಎಸ್.ವೆಂಕಟೇಶಮೂರ್ತಿ, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು, ಹಳೆಯ ಸಂಪ್ರದಾಯದಲ್ಲಿ ಕೃಷಿಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು.

ಮಕ್ಕಳ, ಯುವಕರ, ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು.

. ‘ವೆಂಕಟೇಶಮೂರ್ತಿಯವರು’, ೧೯೪೪ ಜೂನ್ ೨೩ರಂದು ಶಿವಮೊಗ್ಗ ಜಿಲ್ಲೆಯ(ಇಂದು ದಾವಣಗೆರೆ ಜಿಲ್ಲೆಯ)’ಹೊದಿಗೆರೆ’ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ನಾಗರತ್ನಮ್ಮನವರು ಶಿಕ್ಷಕಿಯಾಗಿದ್ದರು.

ಜೀವನ ಚರಿತ್ರೆ
• ‘ಸಿ.ವಿ.ರಾಮನ್'(೧೯೭೪)
• ‘ಹೋಮಿ ಜಹಾಂಗೀರ ಭಾಭಾ'(೧೯೭೫)
• ‘ಸೋದರಿ ನಿವೇದಿತಾ'(೧೯೯೫)
• ‘ಬಾಹುಬಲಿ'(೨೦೦೦)
• ಆತ್ಮ ಕಥನ-‘ಎಚ್ಚೆಸ್ವಿ ಅನಾತ್ಮ ಕಥನ’ (೨೦೧೦)

ಕಥಾ ಸಂಕಲನಗಳು
• ‘ಬಾನಸವಾಡಿಯ ಬೆಂಕಿ'(೧೯೮೦)
• ‘ಪುಟ್ಟಾರಿಯ ಮತಾಂತರ'(೧೯೯೦);

ಕಾದಂಬರಿಗಳು
• ‘ತಾಪಿ'(೧೯೭೮)
• ‘ಅಮಾನುಷರು'(೧೯೮೦)
• ‘ಕದಿರನ ಕೋಟೆ'(೧೯೮೫)
• ‘ಅಗ್ನಿಮುಖಿ'(೧೯೮೬)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read