BIG NEWS : ರಾಜ್ಯದಲ್ಲಿ ‘ಶ್ರವಣ ಸಂಜೀವಿನಿ’ ಯೋಜನೆ ಮರು ವಿನ್ಯಾಸಗೊಳಿಸಿ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದಲ್ಲಿ ‘ಶ್ರವಣ ಸಂಜೀವಿನಿ’ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಶ್ರವಣ ಸಂಜೀವಿನಿ ಯೋಜನೆಯಡಿ ಮಕ್ಕಳಲ್ಲಿ ಕಂಡುಬರುವ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಲಿಯಾರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಹಾಗೂ ಇಂಪ್ಲಾಂಟ್ಗಳ ಬಿಡಿ ಭಾಗಗಳ ನಿರ್ವಹಣೆ, ದುರಸ್ತಿ ಮತ್ತು ಬದಲಾವಣೆ ಮಾಡಲು ರೂ. 12.00 ಕೋಟಿ ಒದಗಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಏಕ-ಕಡತದಲ್ಲಿ ಪ್ರಸ್ತುತ ನಡೆಯುತ್ತಿರುವ ಯೋಜನೆಯನ್ನು ಮುಂದುವರೆಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಯೋಜನೆಯನ್ನು ಮರು ವಿನ್ಯಾಸಗೊಳಿಸಿದ್ದು, ಈ ಕೆಳಕಂಡ ಪ್ರಮುಖ ವೈಶಿಷ್ಟ್ಯ ಒಳಗೊಂಡ ಯೋಜನೆಯ ಅನುಷ್ಠಾನಗೊಳಿಸಲು ಅನುಮೋದನೆ ನೀಡುವಂತೆ ಪ್ರಸ್ತಾಪಿಸಲಾಗಿದೆ.

  1. ಎರಡು ವರ್ಷದವರೆಗಿನ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಿರ್ಬಂಧಿಸುವುದು, ಕೆಲವು ಅತೀ ಅಗತ್ಯವಿರುವ ಉನ್ನತ ಮಟ್ಟದ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದ ಪ್ರಕರಣ ಹೊರತುಪಡಿಸಿ
  2. ಸಾಮಾನ್ಯವಾಗಿ ಕಾಕ್ಲಿಯಾರ್ ಇಂಪ್ಲಾಂಟ್ ಅವಧಿಯು 4 ವರ್ಷಗಳ ಸಮಗ್ರ ಕನಿಷ್ಠ ಖಾತರಿ ಮತ್ತು 8-10 ವರ್ಷಗಳ ಒಟ್ಟು ಅವಧಿಯನ್ನು ಒಳಗೊಂಡಿರುವ ವಿಸ್ತ್ರತ ಖಾತರಿ.
  3. ಒಟ್ಟು ಖಾತರಿ ಅವಧಿಯಲ್ಲಿ ಸುರುಳಿಗಳು ಮತ್ತು ಬ್ಯಾಟರಿಗಳಂತಹ ಬಿಡಿ ಭಾಗಗಳನ್ನು ಬದಲಾಯಿಸಿ ಒದಗಿಸುವುದು.
  4. ಒಟ್ಟು ಖಾತರಿ ಅವಧಿಯಲ್ಲಿ ಪ್ರೊಸೆಸರ್ಗಳ ಬದಲಿಗಾಗಿ ಭಾಗಶ: ಬೆಂಬಲವನ್ನು ಒದಗಿಸಲು
  5. ಪ್ರತಿ ಪ್ರಕರಣಕ್ಕೂ ಅಗತ್ಯತೆಗಳ ಪ್ರಕಾರ AVT ಚಿಕಿತ್ಸೆಯನ್ನು 3 ವರ್ಷಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಸ್ತರಿಸಲು.
  6. ಆರಂಭಿಕವಾಗಿ 18 ತಿಂಗಳ ವಯಸ್ಸಿನೊಳಗೆ ಗುರುತಿಸಲಾದ ಮಕ್ಕಳಿಗೆ ದ್ವಿಪಕ್ಷೀಯ ಕಾಕ್ಲಿಯರ್ ಇಂಪ್ಲಾಂಟ್ಗಳನ್ನು ಒದಗಿಸಲು ಅನುಮತಿಸಲಾಗುವುದು, ಕಾಕ್ಲಿಯರ್ ಇಂಪ್ಲಾಂಟ್ಗಳ ಹೆಚ್ಚುವರಿ ಇಂಪ್ಲಾಂಟ್ ವೆಚ್ಚವನ್ನು ಮಗುವಿನ ಕುಟುಂಬವು ಭರಿಸಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ .
    ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2025-26ನೇ ಸಾಲಿನ ಆಯವ್ಯಯ ಘೋಷಣೆಯ ಖಂಡಿಕೆ-146 ರನ್ವಯ ರಾಜ್ಯದಲ್ಲಿ ಶ್ರವಣ ಸಂಜೀವಿನಿ ಯೋಜನೆಯನ್ನು ಈ ಕೆಳಕಂಡಂತೆ ಮರುವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ:
    1) 2 ವರ್ಷದವರೆಗಿನ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಿರ್ಬಂಧಿಸುವುದು ( ಕೆಲವು ಅತೀ ಅಗತ್ಯವಿರುವ ಉನ್ನತ ಮಟ್ಟದ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದ ಗಡಿ ರೇಖೆಯ ಪ್ರಕರಣ ಹೊರತುಪಡಿಸಿ)
    2) ಸಾಮಾನ್ಯವಾಗಿ ಕಾಕ್ಲಿಯಾರ್ ಇಂಪ್ಲಾಂಟ್ ಸರಬುರಾಜುದಾರರ ಸಮಗ್ರ ಕನಿಷ್ಠ ಖಾತರಿ ಅವಧಿಯು ಸುಮಾರು 4 ವರ್ಷಗಳ ಇರಬೇಕಾಗಿರುತ್ತದೆ. ಅಲ್ಲದೇ, 4-6 ವರ್ಷಗಳ ಹೆಚ್ಚುವರಿ ವಿಸ್ತ್ರತ ಖಾತರಿ ಅವಧಿಯನ್ನು ಪ್ರತ್ತೇಕವಾಗಿ ಸಂಗ್ರಹಿಸಿ ಫಲಾನುಭಾವಿಗಳಿಗೆ ಒದಗಿಸತಕ್ಕದ್ದು.
    3) ಒಟ್ಟು ಖಾತರಿ ಅವಧಿಯಲ್ಲಿ ಸುರುಳಿಗಳು ಮತ್ತು ಬ್ಯಾಟರಿಗಳಂತಹ ಬಿಡಿ ಭಾಗಗಳನ್ನು ಬದಲಾಯಿಸಿ ಒದಗಿಸುವುದು. ಇವುಗಳನ್ನು ಪ್ರತ್ತೇಕವಾಗಿ ಸಂಗ್ರಹಿಸಿ ಸಂಬಂಧಪಟ್ಟ ನೆಟ್ವರ್ಕ್ ಆಸ್ಪತ್ರೆಗಳಿಂದ ಅಗತ್ಯತೆಯಂತೆ ಫಲಾನುಭಾವಿಗಳಿಗೆ ಒದಗಿಸುವುದು.
    4) ಒಟ್ಟು ಖಾತರಿ ಅವಧಿಯಲ್ಲಿ ಪ್ರೊಸೆಸ್ಸರ್ಗಳ ಬದಲಿಗಾಗಿ ಅಗತ್ಯವಿದ್ದಲ್ಲಿ ಕನಿಷ್ಠ 50% ಭಾಗಶ: ಬೆಂಬಲವನ್ನು ಫಲಾನುಭಾವಿಗಳಿಗೆ ಒದಗಿಸುವುದು.
    5) ಪ್ರತಿ ಪ್ರಕರಣಕ್ಕೂ ಅಗತ್ಯತೆಗಳ ಪ್ರಕಾರ AVT ಚಿಕಿತ್ಸೆಯನ್ನು 3 ವರ್ಷಗಳವರೆಗೆ ಅಥವಾ ಅಗತ್ಯವಿದ್ದಲ್ಲಿ ಅದಕ್ಕಿಂತ ಹೆಚ್ಚು ಕಾಲ ವಿಸ್ತರಿಸುವುದು.
    6) 18 ತಿಂಗಳ ವಯಸ್ಸಿನೊಳಗೆ ಗುರುತಿಸಲಾದ ಮಕ್ಕಳಿಗೆ ದ್ವಿಪಕ್ಷಿಯ ಕಾಕ್ಲಿಯರ್ ಇಂಪ್ಲಾಂಟ್ ಗಳನ್ನು ಒದಗಿಸಲು ಮಗುವಿನ ಕುಟುಂಬವು ಇಚ್ಚಿಸಿದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಗಳ ಹೆಚ್ಚುವರಿ ಇಂಪ್ಲಾಂಟ್ ವೆಚ್ಚವನ್ನು ಅವರುಗಳ ಭರಿಸುವ ಷರತ್ತಿಗೊಳಪಟ್ಟು ಅನುಮತಿಸುವುದು. ಆದರೆ ಹೆಚ್ಚುವರಿ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಸರ್ಕಾರವು ನೀಡುವ ಕಾರ್ಯವಿಧಾನದ ವೆಚ್ಚದಲ್ಲಿ SAST ಮೂಲಕ ಭರಿಸುವುದು.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read